ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಮಿತಿ ಶಾಂತಿಗೋಡು ಗ್ರಾಮ ಸಮಿತಿಯ 2024-25ನೆ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ದಾಮೋದರ ಸುವರ್ಣ ಕರ್ಪುತಮೂಲೆ, ಉಪಾಧ್ಯಕ್ಷರಾಗಿ ಜಗದೀಶ್ ಪೂಜಾರಿ ಪುಣ್ಯಕೋಟಿ, ಪರಕಮೆ, ಕಾರ್ಯದರ್ಶಿಯಾಗಿ ಗಣೇಶ್ ಪೂಜಾರಿ ಕೈಂದಾಡಿ, ಜೊತೆ ಕಾಯದರ್ಶಿಯಾಗಿ ರಮೇಶ್ ಪೂಜಾರಿ ಪರಕಮೆ, ಕೋಶಾಧಿಕಾರಿಯಾಗಿ ಕೊರಗಪ್ಪ ಸಾಲ್ಯಾನ್ ಕುಕ್ಯಾನ, ಸಂಘಟನಾ ಕಾಯದರ್ಶಿಯಾಗಿ ಪ್ರದೀಪ್ ಕೈಂದಾಡಿ, ಬಿಲ್ಲವ ಮಹಿಳಾ ಘಟಕದ ಅಧಕ್ಷೆಯಾಗಿ ಅಮಿತಾ ಸುದರ್ಶನ್ ಓಲಾಡಿ, ಉಪಾಧ್ಯಕ್ಷರಾಗಿ ಶಶಿಕಲಾ ಉಮೇಶ್ ಕಲ್ಲರ್ಪೆ, ಕಾಯದರ್ಶಿಯಾಗಿ ರಕ್ಷಿತಾ ಗಣೇಶ್ ಕೈಂದಾಡಿ, ಜೊತೆ ಕಾಯದರ್ಶಿಯಾಗಿ ವಿನುತಾ ರಘುನಾಥ ಕೈಂದಾಡಿ, ಕೋಶಾಧಿಕಾರಿಯಾಗಿ ಯಶೋಧ ಚಂದ್ರಹಾಸ ಬಜಪ್ಪಳ ಆಯ್ಕೆಯಾದರು.
ಯುವವಾಹಿನಿ ಗ್ರಾಮ ಸಂಚಲನಾ ಸಮಿತಿ ಅಧ್ಯಕ್ಷರಾಗಿ ಸಚ್ಚೀಂದ್ರ ಬೊಳ್ಳೆಕ್ಕು, ಕಾಯದರ್ಶಿಯಾಗಿ ನಿತೇಶ್ ಓಲಾಡಿ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಸಂಜಯ್ ಹೊಸಮನೆ, ಕಾಯದರ್ಶಿಯಾಗಿ ಕು. ವೀಕ್ಷಾ ಕೈಂದಾಡಿ ಆಯ್ಕೆಯಾದರು.
























