ಪುತ್ತೂರು: ವಿಟ್ಲ ಎಂಎಸ್ ಎ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಕುಮಾರಿ ಕೀರ್ತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.
ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜು.26 ರಿಂದ 30 ರ ತನಕ ನಡೆಯುವ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಬುಧವಾರ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ಕುಮಾರಿ ಕೀರ್ತಿ ವಿಟ್ಲ ಪಡ್ನೂರು ಗ್ರಾಮ ಕುಕ್ಕಿಲ ಮನೆ ವನಿತಾ ಹಾಗೂ ಲಕ್ಷ್ಮಣ ಗೌಡ ದಂಪತಿ ಪುತ್ರಿಯಾಗಿದ್ದಾರೆ. ಇವರ ಕ್ರೀಡಾ ಸಾಧನೆಯು ಯಶಸ್ವಿಯಾಗಿ ಪ್ರಜ್ವಲಿಸುವಂತೆ ಶ್ರೀ ದೇವರು ಕರುಣಿಸಲಿ.
























