ಪುತ್ತೂರು: ಈ ಬಾರಿಯ ಮಳೆಯ ಆರಂಭದಲ್ಲಿ ಮಳೆಯ ತೀವ್ರತೆಯಿಂದ 82 ಮನೆಗಳು ಭಾಗಶಃ ಹಾನಿಗೊಳ ಗಾಗಿದ್ದು, ಈ ಮನೆಗಳಿಗೆ ತಲಾ ರೂ.6500ನಂತೆ ಒಟ್ಟು ರೂ.533000 ಪ್ರಾಕೃತಿಕವಿಕೋಪ ಹಿನ್ನಲೆಯಲ್ಲಿ ಪರಿಹಾರವನ್ನು ಪುತ್ತೂರು ತಹಶೀಲ್ದಾರ್ ನಾಗರಾಜ್ ಅವರು ವಿತರಣೆ ಮಾಡಿದ್ದಾರೆ.
ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿತ್ತು. ತಾಲೂಕಿನಲ್ಲಿ 3 ದನದ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದ್ದು, ಇದಕ್ಕೆ ಸಂಬಂಧಿಸಿ ತಲಾ 3000 ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ 22 ಬೆಳೆಹಾನಿ ಪ್ರಕರಣಗಳ ವರದಿಯಾಗಿದ್ದು, ಶೇ33ಕ್ಕಿಂತ ಹೆಚ್ಚು ಬೆಳೆಹಾನಿಯಾದ ಸಂದರ್ಭದಲ್ಲಿ ಮಾತ್ರ ಪರಿಹಾರ ನೀಡಲು ಅವಕಾಶವಿದ್ದು, ಈ ಹಿನ್ನಲೆಯಲ್ಲಿ ಈ ಪ್ರಕರಣಗಳನ್ನು ಪರಿಶೀಲನೆಗೆಗಾಗಿ ತೋಟಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿದೆ.
ಈ ಸಂಬಂಧ ಪರಿಶೀಲನೆಯ ನಂತರ ಪರಿಹಾರಧನ ವಿತರಣೆ ನಡೆಸಲಾಗುವುದು ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಎಲ್ಲಾ ಪ್ರಕರಣಗಳಿಗೆ 5,70,900 ರೂ. ಪರಿಹಾರಧನವನ್ನು ವಿತರಣೆ ಮಾಡಲಾಗಿದೆ.