ಅಧ್ಯಯನ ಪ್ರವಾಸ ಕೈಗೊಂಡ ನಿಯೋಗ ಯುದ್ಧದ ನಡುವೆ ಬಾಕಿ
ಬೆಂಗಳೂರು : ಇಸ್ರೇಲ್ ಮತ್ತು ಇರಾನ್ನ ನಡುವಿನ ಯುದ್ಧ ತೀವ್ರಗೊಂಡಿರುವಂತೆಯೇ ಕರ್ನಾಟಕದ 19 ಮಂದಿಯ ನಿಯೋಗವೊಂದು ಇಸ್ರೇಲ್ನಲ್ಲಿ ಸಿಕ್ಕಿಬಿದ್ದಿರುವ ಸುದ್ದಿಯೊಂದು ಬಂದಿದೆ. ಪಶ್ಚಿಮ ಏಷ್ಯಾದಲ್ಲಿ ಪರಮಾಣು ಯುದ್ಧದ ಭೀತಿ ತಲೆದೋರಿರುವಾಗಲೇ ಈ ನಿಯೋಗದ 19 ಮಂದಿ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಆತಂಕದ ಸ್ಥಿತಿಯಲ್ಲಿ ಇದ್ದಾರೆ ಎನ್ನಲಾಗಿದೆ.
ಕರ್ನಾಟಕದ 19 ಜನರನ್ನೊಳಗೊಂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಿಯೋಗ ಅಧ್ಯಯನ ಸಲುವಾಗಿ ಇಸ್ರೇಲ್ಗೆ ಹೋಗಿತ್ತು. ಇಸ್ರೇಲ್ನಲ್ಲೇ ಉಳಿದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದು, ನಿಯೋಗದ ಸದಸ್ಯರ ಜತೆ ಗೃಹ ಸಚಿವ ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಿಯೋಗ ಇತ್ತೀಚೆಗೆ ಬಿ ಪ್ಯಾಕ್ ಸಂಸ್ಥೆಯ ಮೂಲಕ ಅಧ್ಯಯನಕ್ಕಾಗಿ ಇಸ್ರೇಲ್ಗೆ ತೆರಳಿತ್ತು. ನಿನ್ನೆಯೇ ನಿಯೋಗ ವಾಪಸ್ ಆಗಬೇಕಿತ್ತು. ಆದರೆ ವಿಮಾನ ರದ್ದಾದ ಕಾರಣ ಇಸ್ರೇಲ್ನಲ್ಲೇ ಉಳಿದುಕೊಳ್ಳುವಂತಾಗಿದೆ.
ಆದರೆ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.