ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿದೆ ಕರ್ನಾಟಕದ 19 ಮಂದಿಯ ತಂಡ

ಅಧ್ಯಯನ ಪ್ರವಾಸ ಕೈಗೊಂಡ ನಿಯೋಗ ಯುದ್ಧದ ನಡುವೆ ಬಾಕಿ

ಬೆಂಗಳೂರು : ಇಸ್ರೇಲ್‌ ಮತ್ತು ಇರಾನ್‌ನ ನಡುವಿನ ಯುದ್ಧ ತೀವ್ರಗೊಂಡಿರುವಂತೆಯೇ ಕರ್ನಾಟಕದ 19 ಮಂದಿಯ ನಿಯೋಗವೊಂದು ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿರುವ ಸುದ್ದಿಯೊಂದು ಬಂದಿದೆ. ಪಶ್ಚಿಮ ಏಷ್ಯಾದಲ್ಲಿ ಪರಮಾಣು ಯುದ್ಧದ ಭೀತಿ ತಲೆದೋರಿರುವಾಗಲೇ ಈ ನಿಯೋಗದ 19 ಮಂದಿ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಆತಂಕದ ಸ್ಥಿತಿಯಲ್ಲಿ ಇದ್ದಾರೆ ಎನ್ನಲಾಗಿದೆ.

ಕರ್ನಾಟಕದ 19 ಜನರನ್ನೊಳಗೊಂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​​ ನಿಯೋಗ ಅಧ್ಯಯನ ಸಲುವಾಗಿ ಇಸ್ರೇಲ್‌ಗೆ ಹೋಗಿತ್ತು. ಇಸ್ರೇಲ್​ನಲ್ಲೇ ಉಳಿದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದು, ನಿಯೋಗದ ಸದಸ್ಯರ ಜತೆ ಗೃಹ ಸಚಿವ ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.



















































 
 

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​​ ನಿಯೋಗ ಇತ್ತೀಚೆಗೆ ಬಿ ಪ್ಯಾಕ್ ಸಂಸ್ಥೆಯ ಮೂಲಕ ಅಧ್ಯಯನಕ್ಕಾಗಿ ಇಸ್ರೇಲ್​ಗೆ ತೆರಳಿತ್ತು. ನಿನ್ನೆಯೇ ನಿಯೋಗ ವಾಪಸ್​ ಆಗಬೇಕಿತ್ತು. ಆದರೆ ವಿಮಾನ ರದ್ದಾದ ಕಾರಣ ಇಸ್ರೇಲ್​ನಲ್ಲೇ ಉಳಿದುಕೊಳ್ಳುವಂತಾಗಿದೆ.
ಆದರೆ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top