ನರೇಂದ್ರ ಪ.ಪೂ.ಕಾಲೇಜಿನ ಗ್ರಾಮ ವಿಕಾಸ ಸಮಿತಿಯ ಉದ್ಘಾಟನೆ

ಪುತ್ತೂರು: ಶಿಕ್ಷಣ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ವೇದಿಕೆಯನ್ನು ಒದಗಿಸಿದಾಗ ಗ್ರಾಮೀಣ ಪ್ರದೇಶಗಳು ತಮ್ಮ ಬೆಳವಣಿಗೆಯ ನಿರೀಕ್ಷೆಗಳನ್ನು ಸುಧಾರಿಸಲು ಸಹಾಯವಾಗುತ್ತದೆ. ಇದಕ್ಕೆ ಪೂರಕವಾಗಿ ಗ್ರಾಮವಿಕಾಸ ಸಮಿತಿಯ ಯೋಜನೆಗಳು ಕಾರ್‍ಯನಿರ್ವಹಿಸುತ್ತದೆ. ಗ್ರಾಮೀಣ ಪ್ರಗತಿಯಿಂದ ಮಾತ್ರ ರಾಷ್ಟ್ರವು ಅಭಿವದ್ಧಿಯ ಪಥದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನ ಗ್ರಾಮ ವಿಕಾಸ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರಪ.ಪೂ.ಕಾಲೇಜಿನ ಕುರಿಯ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈಯವರು 2025-26 ನೇ ಸಾಲಿನ ನೂತನ ಸಮಿತಿಯ ರಚನೆಯನ್ನು ಅಧಿಕೃತವಾಗಿ ಘೋಷಿಸಿದರು.



















































 
 

ಅಧ್ಯಕ್ಷರಾಗಿ ರವೀಂದ್ರನಾಥ ರೈ, ಉಪಾಧ್ಯಕ್ಷರಾಗಿ ಮೋಹನ್ ಪಾಟಾಳಿ ಮತ್ತು  ರಮ್ಯಾ,  ಕಾರ್‍ಯದರ್ಶಿಗಳಾಗಿ ಕೀರ್ತಿ ನಕ್ಷತ್ರಿತ್ತಾಯ, ಜೊತೆ ಕಾರ್‍ಯದರ್ಶಿಗಳಾಗಿ ಸುಕನ್ಯಾ ಮತ್ತು ಶ್ರೀಕೃಷ್ಣ ಸದಸ್ಯರಾಗಿ ಜಯರಾಜ್ ಭಂಡಾರಿ, ಗಣೇಶ್ ರೈ ಬೂಡಿಯಾರು, ಮಧು, ಧನರಾಜ್, ಶಶಿಧರ ಕಿನ್ನಿಮಜಲು, ಚಂದ್ರಹಾಸ ರೈ, ಸುರೇಂದ್ರ ರೈ, ಸತೀಶ್ ರೈ, ನವೀನ್ ಕುಮಾರ್ ರೈ, ವಿಜಯ ಹರಿ ರೈ ಆಯ್ಕೆಯಾದರು.

ಈ ಕಾರ್‍ಯಕ್ರಮದಲ್ಲಿ ನರೇಂದ್ರ ಪ.ಪೂ.ಕಾಲೇಜು ಮತ್ತು ಕುರಿಯ ಗ್ರಾಮ ವಿಕಾಸ ಸಮಿತಿ ವತಿಯಿಂದ ಈ ವರ್ಷ ಆಯೋಜಿಸಲಿರುವ ಕಾರ್‍ಯಕ್ರಮಗಳ ಕುರಿತು ನಿರ್ಧರಿಸಲಾಯಿತು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ.,ಸದಸ್ಯರಾದ ಉಮೇಶ್ ನಾಯಕ್, ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್, ಕಳೆದ ಸಾಲಿನ ಗ್ರಾಮವಿಕಾಸ ಸಮಿತಿಯ ಪ್ರಧಾನ ಕಾರ್‍ಯದರ್ಶಿ ರೇಖನಾಥ ರೈ ಉಪಸ್ಥಿತರಿದ್ದರು.

ಕಾಲೇಜಿನ ಗ್ರಾಮವಿಕಾಸ ಸಮಿತಿ ಸಂಯೋಜಕ, ಉಪನ್ಯಾಸಕ ಕಾರ್ತಿಕ್ ಕುಮಾರ್  ಸ್ವಾಗತಿಸಿ, ವಂದಿಸಿದರು. ಕಾಲೇಜಿನ ಸಿಬ್ಬಂದಿ ಸತೀಶ್ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top