G5 Nexusನ ವಿನೂತನ ಯೋಜನೆಯಾದ ANGEL Gardeniaದ ಭೂಮಿ ಪೂಜೆ

ಪುತ್ತೂರು: ಪುತ್ತೂರು ನಗರದಲ್ಲಿ, ಬಸ್ ನಿಲ್ದಾಣದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿನ ಕಲ್ಲಿಮಾರಿನ ಮುಖ್ಯ ರಸ್ತೆಯಲ್ಲಿ ANGEL Gardenia – A house of luxury ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ವಸತಿ ಸಮುಚ್ಛಯದ ಭೂಮಿ ಪೂಜೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.

ಬೆಳಿಗ್ಗೆ ಗಂಟೆ 6ಕ್ಕೆ ಸರಿಯಾಗಿ ಗಣಪತಿ ಹವನದೊಂದಿಗೆ ಆರಂಭವಾದ ಕಾರ್ಯಕ್ರಮದ ಬಳಿಕ ಪುತ್ತೂರಿನ ಮಾಯ್ದೆದೇವುಸ್ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ರೆ.ಫಾ. ಮರ್ವಿನ್ ಲೋಬೋರವರು ಧಾರ್ಮಿಕ ಪೂಜೆ ಮತ್ತು ಸ್ಥಳ ಶುದ್ಧಿ ಕಾರ್ಯಕ್ರಮವನ್ನು ನೆರವೇರಿಸಿದರು.

ಸಭಾ ಕಾರ್ಯಕ್ರಮ



















































 
 

ಸಂಕ್ಷಿಪ್ತವಾದ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ರೆ.ಫಾ. ಮರ್ವಿನ್ ಲೋಬೋರವರು ಪ್ರವಚನವನ್ನು ನೀಡಿ ಪಂಚಭೂತಗಳು ಜಗತ್ತನ್ನು ನಿಯಂತ್ರಿಸುವಂತೆ G5 Nexusನ ಐದು ಜನ ಸ್ನೇಹಿತರು ಸೇರಿಕೊಂಡು ANGEL Gardenia ಯೋಜನೆಯನ್ನು ರೂಪಿಸಿ ಅನುಷ್ಠಾನಿಸಲಿರುವುದು ಬೆಳೆಯುತ್ತಿರುವ ಪುತ್ತೂರಿಗೆ ಒಂದು ಗುರುತರವಾದ ಕೊಡುಗೆಯಾಗಿದೆ ಎಂದು ಶ‍್ಲಾಘಿಸಿದರು. ತನ್ನ ಭೂಮಿಯನ್ನು ಇಂತಹ ಒಂದು ಯೋಜನೆಗಾಗಿ ಬಿಟ್ಟುಕೊಡುವ ಮನಸ್ಸು ಮಾಡಿದ ಭೂಮಾಲೀಕರಾದ ವಿಕ್ಟರ್ ವಾಲ್ಟರ್ ಮತ್ತು ಜಸಿಂತ ಮಸ್ಕರೇಂಞಸ್ ದಂಪತಿಗಳನ್ನು ಅವರ ಸೇವೆ ಮಹತ್ತರವಾದುದು ಎಂದರು.

G5 Nexusನ ಪಾಲುದಾರರಲ್ಲಿ ಓರ್ವರಾದ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು ಅವರು ಮಾತನಾಡಿ ಸಂಸ್ಥೆಯ ಹಿನ್ನೆಲೆ ಮತ್ತು ಭವಿಷ್ಯದ ಯೋಜನೆಗಳನ್ನು ಬಿಚ್ಚಿಟ್ಟರು. ಅವರ ಜೊತೆಗೆ ಕೈ ಜೋಡಿಸಿರುವ ಯತೀಶ್ ಪೂಜಾರಿ, ಪ್ರಸಾದ್ ಕೆ.ಎನ್., ನಿತಿನ್ ಪಕ್ಕಳ ಮತ್ತು ನಿತಿನ್ ಮಂಗಳಾ ಅವರ ಸಹಕಾರಗಳನ್ನು ಸ್ಮರಿಸಿಕೊಂಡರು.

ANGEL Gardenia ಯೋಜನೆಯ ವಾಸ್ತು ಮತ್ತು ಕಟ್ಟಡ ವಿನ್ಯಾಸಕಾರರಾದ MIT ಮಣಿಪಾಲದ ಪ್ರೊಫೆಸರ್ ಧನಪ್ರಕಾಶ್ ಅವರು ಮಾತನಾಡಿ ಸದರಿ ಯೋಜನೆಯು ಹೇಗೆ ವಿಭಿನ್ನವಾಗಿದೆ ಮತ್ತು ಸಕಲ ವ್ಯವಸ್ಥೆಗಳನ್ನು ಹೊಂದಿದೆ ಎನ್ನುವುದರ ಕುರಿತಾಗಿ ಮಾಹಿತಿ ನೀಡಿದರು.

ಸನ್ಮಾನ

ಭೂಮಾಲೀಕರಾದ ವಿಕ್ಟರ್ ವಾಲ್ಟರ್ ಮತ್ತು ಜಸಿಂತ ಮಸ್ಕರೇನ್ಹಸ್ ದಂಪತಿಗಳನ್ನು G5 Nexusನ ವತಿಯಿಂದ ಸನ್ಮಾನಿಸಲಾಯಿತು. ಧರ್ಮಗುರುಗಳಾದ  ರೆ.ಫಾ. ಮರ್ವಿನ್ ಲೋಬೋರವರು ಸನ್ಮಾನವನ್ನು ನೆರವೇರಿಸಿದರು.

ಕರಪತ್ರ ಬಿಡುಗಡೆ

ANGEL Gardenia ಯೋಜನೆಯ ಸಮಗ್ರ ಯೋಜನೆಯ ಮಾಹಿತಿಗಳುಳ್ಳ ಸುಂದರವಾದ ಕರಪತ್ರವನ್ನು ರೆ.ಫಾ. ಮರ್ವಿನ್ ಲೋಬೋ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ವಿಶ್ರಾಂತ ಪ್ರಾಂಶುಪಾಲ, ನ್ಯೂಸ್ ಪುತ್ತೂರಿನ ಅಧ್ಯಕ್ಷ ಸೀತಾರಾಮ ಕೇವಳ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಮತ್ತು ಭೂ ಮಾಲೀಕ ದಂಪತಿಗಳನ್ನು ಯತೀಶ್ ಪೂಜಾರಿ, ಪ್ರಸಾದ್ ಕೆ.ಎನ್. ಮತ್ತು ನಿತಿನ್ ಮಂಗಳಾ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಉದ್ಯಮಿ ಪ್ರಭಾಕರ ಶೆಟ್ಟಿ ವಿಟ್ಲ, ರತನ್ ನಾಯಕ್ ಕರ್ನೂರುಗುತ್ತು, ವಿಶ್ರಾಂತ ಸಮಾಜ ಕಾರ್ಯ ಪ್ರೊಫೆಸರ್ ಪೌಲ್ ಹೆರಾಲ್ಡ್ ಮಸ್ಕರೇಞಸ್, ವಿನ್ಸೆಂಟ್ ಮಸ್ಕರೇಞಸ್ ಮತ್ತು ಜೆರಾಲ್ಡ್ ವೇಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯೋಪಾಧ್ಯಾಯರಾದ ಸತೀಶ್ ರೈ, ಪ್ರೇರಣಾ ಪುತ್ತೂರು ಇದರ ಆಡಳಿತ ನಿರ್ದೇಶಕ ಮುರಳೀಧರ ಕೆ. ಎಲ್., ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಇದರ ನಿರ್ದೇಶಕ ಪ್ರವೀಣ್ ಕುಂಟ್ಯಾಣ, ನ್ಯೂಸ್ ಪುತ್ತೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ ಕೆಡೆಂಜಿ, ಪ್ರೇರಣಾ ಪ್ರಾಪರ್ಟೀಸ್ ಇದರ ಕಾರ್ಯದರ್ಶಿ ವಸಂತ ವೀರಮಂಗಲ, ನಳೀಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top