ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ಸದಾನಂದ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ | ಸದಾನಂದ ಶೆಟ್ಟಿಯವರು ಅಹಂ ಇರದ ಸಜ್ಜನಿಕೆಯ ವ್ಯಕ್ತಿಯಾಗಿದ್ದರು : ಸಂಜೀವ ಮಠಂದೂರು | ಸದಾನಂದ ಶೆಟ್ಟಿಯವರು ಯುವಕರಿಗೆ ಪ್ರೇರಣಾದಾಯಿಯಾದ ಜೀವನ ನಡೆಸಿದವರು : ಸುನಿಲ್ ಕುಮಾರ್ ದಡ್ಡು

ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ಸದಾನಂದ ಶೆಟ್ಟಿಯವರು ಇತ್ತೀಚಿಗೆ ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಸಂಗಮ ಕೃಪಾ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಮಾತನಾಡಿ, ಸದಾನಂದ ಶೆಟ್ಟಿಯವರು ಯುವಕರಿಗೆ ಪ್ರೇರಣಾದಾಯಿಯಾದ ಜೀವನ ನಡೆಸಿದವರು, ಕಳೆದ ಅಲ್ಪ ಸಮಯದಲ್ಲಿ ಅವರ ಒಡನಾಟ ಇತ್ತು. ನಿಷ್ಠೆ, ಪ್ರಾಮಾಣಿಕತೆ ಹಾಗು ಬದ್ಧತೆ ಅವರಲ್ಲಿ ಸದಾ ಎದ್ದು ಕಾಣುತ್ತಿತ್ತು. ನಿವೃತ್ತಿ ಹೊಂದಿದ BSNL ಸಿಬ್ಬಂದಿಯಾಗಿದ್ದರು, ಎಲ್ಲಾ ವಯೋಮಾನದವರ ಜೊತೆ ಹಾಗೂ ಎಲ್ಲರಲ್ಲಿ ಸಮಾನತೆಯಲ್ಲಿ ಬೆರೆಯುವ ಗುಣ ಅವರಲ್ಲಿ ಇತ್ತು.ಇಂತಹ ಓರ್ವ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿ ಅವರ ಅಗಲಿಕೆ ಸಂತಾಪವನ್ನು ಸೂಚಿಸಿದರು.

ಪುತ್ತೂರು ಮಾಜಿ ಶಾಸಕ ಸಂಜೀವ  ಮಠಂದೂರು ಮಾತನಾಡಿ, ಸದಾನಂದ ಶೆಟ್ಟಿಯವರು ಕೇಂದ್ರ ಸರಕಾರದ ಅಧೀನದ ಸಂಸ್ಥೆಯಾದ BSNL ಉದ್ಯೋಗಿಯಾಗಿದ್ದು, ನಗುಮೊಗದ ಸೇವೆಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುತಿದ್ದರು. ಎಂದೂ ಅಹಂ ಇರದ ಸಜ್ಜನಿಕೆಯ ವ್ಯಕ್ತಿಯಾಗಿದ್ದರು, ಕಳೆದ 30 ವರುಷದಿಂದ ಸದಾನಂದ ಶೆಟ್ಟಿ ಯವರ ಮನೆ ಸಮಾಜ ಜೊತೆ ಸದಾ ಇತ್ತು.ಎಲೆ ಮರೆಯ ಕಾಯಿಯಂತೆ ತಮ್ಮ ಸೇವೆಯನ್ನು ಯಾವುದೇ ಪ್ರಚಾರ ಇಲ್ಲದೆ ನಿಸ್ವಾರ್ಥದಿಂದ ಸಮಾಜಕ್ಕೆ ನೀಡುತ್ತಿದ್ದರು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಈ ನಡುವೆ ಸಾರ್ಥಕ ಜೀವನ ನಡೆಸುವುದು ಮುಖ್ಯವಾಗಿರುತ್ತದೆ. ಈ ತರಹದ ಮಾದರಿ ಜೀವನ ನಡೆಸಿದವರು ಸದಾನಂದ ಶೆಟ್ಟಿಯವರು ಎಂದ ಹೇಳಿ, ಅವರ ಕುಟುಂಬದವರಿಗೆ ಭಗವಂತ ಶಕ್ತಿ ನೀಡಲಿ ಎಂದರು.



















































 
 

ಕಾರ್ಯಕ್ರಮದಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ ಹಾಗೂ ಸದಾನಂದ ಶೆಟ್ಟಿಯವರ ಸಹೋದರ ಲಕ್ಷ್ಮಣ ಶೆಟ್ಟಿ ಉಪಸ್ಥಿತರಿದ್ದರು. ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಶೆಟ್ಟಿ ನಿರ್ವಹಿಸಿದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top