ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಸಂಯೋಜಕರಾಗಿ ಕುದ್ಮಾರಿನ ಡಾ. ಮೀರಾಮಣಿ ಎನ್. ಆಯ್ಕೆ

ಪುತ್ತೂರು: ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್  ವಿಶ್ವವಿದ್ಯಾಲಯದಲ್ಲಿ ವರ್ಲ್ಡ್ ಆರ್ಕಿಯಾಲಜಿಕಲ್ ಕಾಂಗ್ರೆಸ್ ಜೂನ್ 22ರಿಂದ 28ರವರೆಗೆ ಆಯೋಜಿಸುತ್ತಿರುವ ಸಮ್ಮೇಳನದಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಡಾ.ಮೀರಾಮಣಿಯವರು ಸಂಯೋಜಕರಾಗಿ “ಸೆಕ್ರೆಡ್ ನರೇಟಿವ್ಸ್ ಆಂಡ್ ರಿಚುವಲ್ ಎಕ್ಸ್ ಪ್ರೆಷನ್ಸ್: ಎಕ್ಸ್ ಪ್ಲೋರಿಂಗ್ ಸೌತ್ ಏಷಿಯಾಸ್ ಫೋಕ್ ಟ್ರೆಡಿಷನ್ಸ್ ಆಂಡ್ ಕಲ್ಚರಲ್ ಕಂಟಿನ್ಯೂಟಿ” ಗೆ ಆಯ್ಕೆಯಾಗಿದ್ದಾರೆ.

ಅವರು ಸಮ್ಮೇಳನದಲ್ಲಿ “ಡಿಜಿಟಲ್ ಪ್ರಿಸರ್ವೇಶನ್ ಆಂಡ್ ಕಲ್ಚರಲ್ ಹೆರಿಟೇಜ್ ಇನ್ ಇಂಡಿಯಾ : ವಿತ್ ಸ್ಪೆಷಲ್ ರೆಫರೆನ್ಸ್ ಟು ಇನ್ಸ್ಟಿಟ್ಯೂಷನಲ್ ರೆಪೊಸಿಟರೀಸ್ ಇನ್ ಕರ್ನಾಟಕ ಸ್ಟೇಟ್” ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ ಹಾಗೂ “ಫೋಕ್ ಕಲ್ಚರ್ ಇನ್ ಇಂಡಿಯಾ : ರಿಚುವಲ್ ಆಂಡ್ ಸ್ಪಿರಿಚುಯಲ್ ಪ್ರಾಕ್ಟೀಸ್”  ಮೇಲೆ ಪ್ರಬಂಧ ಮಂಡಿಸಲಿದ್ದಾರೆ. ಇಲ್ಲಿ ಸುಮಾರು 70 ದೇಶಗಳ ಸಂಶೋಧಕರು ಭಾಗವಹಿಸಲಿದ್ದಾರೆ.

ಇವರು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಆನಂದ ಪರ್ಲಾ ಅವರ ಧರ್ಮಪತ್ನಿ.



















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top