ನೆಲ್ಯಾಡಿ: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಬಿಲ್ಡಿಂಗ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆಯು ಜೂ.8ರಂದು ಯಶಸ್ವಿ 12ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು.
ಜೂ.8ರಂದು ಬೆಳಿಗ್ಗೆ ನೆಲ್ಯಾಡಿ ಡೆಂಜ ಕಾಂಪ್ಲೆಕ್ಸ್ ನಲ್ಲಿರುವ ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. ಹಾರ್ವಳ ಶ್ರೀ ಶಾಸ್ತರೇಶ್ವರ ದೇವಸ್ತಾನದ ಅರ್ಚಕ ಶ್ರೀಧರ ನೂಜಿನ್ನಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು.
ಬಳಿಕ ನಡೆದ ಸರಳದ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು 2002ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡಿದ್ದು 2014ರಲ್ಲಿ ಸಂಘದ 4ನೇ ನೆಲ್ಯಾಡಿ ಶಾಖೆ ಆರಂಭಗೊಂಡಿದೆ. ಕಳೆದ ವರ್ಷ ನೆಲ್ಯಾಡಿ ಶಾಖೆಯ ದಶಮಾನೋತ್ಸವ ಸಮಾರಂಭ ಆಚರಿಸಲಾಗಿದೆ. ಇದೀಗ ಸಂಘ 11 ವರ್ಷ ಪೂರ್ಣಗೊಳಿಸಿ 12ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಪ್ರಸ್ತುತ ಸಂಘವು ಒಟ್ಟು 10 ಶಾಖೆಗಳನ್ನು ಹೊಂದಿದ್ದು ಈ ಭಾಗದ ಗ್ರಾಹಕರ ಸಹಕಾರದೊಂದಿಗೆ ನೆಲ್ಯಾಡಿ ಶಾಖೆಯಲ್ಲಿ ಅತ್ಯುತ್ತಮ ವ್ಯವಹಾರ ನಡೆಯುತ್ತಿದೆ. 2024-25ನೇ ಸಾಲಿನಲ್ಲಿ ನೆಲ್ಯಾಡಿ ಶಾಖೆಯಲ್ಲಿ 54.43 ಕೋಟಿ ವ್ಯವಹಾರ ನಡೆದಿದೆ. 12.27 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. 12.86 ಕೋಟಿ ರೂ. ಸಾಲ ವಿತರಣೆಯಾಗಿದ್ದು 98.46 ಶೇ. ವಸೂಲಾತಿಯಾಗಿದೆ ಎಂದರು. ಸಂಘದ 10 ಶಾಖೆಗಳಲ್ಲೂ ಉತ್ತಮ ವ್ಯವಹಾರ ನಡೆಯುತ್ತಿದೆ. ಈ ವರ್ಷ ಒಟ್ಟು ರೂ.744 ಕೋಟಿಗೂ ಹೆಚ್ಚು ವ್ಯವಹಾರ ನಡೆದಿದೆ. ಎಲ್ಲರ ಸಹಕಾರದಿಂದ ಸಂಘ ನಿರಂತರವಾಗಿ ಬೆಳವಣಿಗೆಯಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಯು.ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ನಿರ್ದೇ ಶಕ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷ ಸುಪ್ರೀತಾ ರವಿಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ನಿರ್ದೇಶಕಿ ತೇಜಸ್ವಿನಿ ಶೇಖರ ಗೌಡ, ಮಾಜಿ ನಿರ್ದೇಶಕ ನಾಗೇಶ್ ನಳಿಯಾರು, ಶಾಖಾ ಸಲಹಾ ಸಮಿತಿ ಸದಸ್ಯರಾದ ಸುಂದರ ಗೌಡ ಅತ್ರಿಜಾಲು, ರಾಧಾಕೃಷ್ಣ ಗೌಡ ಕರ್ನಡ್ಯ, ನೋಣಯ್ಯ ಗೌಡ ಡೆಬೇಲಿ, ಡೊಂಬಯ್ಯ ಗೌಡ ಶಿರಾಡಿ, ಜಿನ್ನಪ್ಪ ಗೌಡ ಪೊಸೊಳಿಗೆ, ಸುರೇಶ ಪಡಿಪಂಡ, ಸುಲತಾಮೋಹನಚಂದ್ರ, ಕಡಬ ಶಾಖಾ ಮೇನೇಜರ್ ಶಿವಪ್ರಸಾದ್, ಉಪ್ಪಿನಂಗಡಿ ಶಾಖಾ ಮೇನೇಜರ್ ರೇವತಿ, ಸಿಬ್ಬಂದಿಗಳಾದ ಜಯಂತ್, ರಾಧಾಕೃಷ್, ಭವಿತ್ರಾಜ್, ವಿಟ್ಲ ಶಾಖಾ ಮೇನೇಜರ್ ದಿನೇಶ್, ಕುಂಬ್ರ ಶಾಖಾ ಮೇನೇಜರ್ ಹರೀಶ್, ಅಲಂಕಾರು ಶಾಖಾ ಮೇನೇಜರ್ ಪ್ರೀತಮ್, ಸಿಬ್ಬಂದಿ ರಾಜೇಶ್, ಪುತ್ತೂರು ಎಪಿಎಂಸಿ ರಸ್ತೆ ಶಾಖೆ ಸಿಬ್ಬಂದಿ ಯಶ್ಚಿತ್, ಗ್ರಾಹಕರಾದ ಗುಮ್ಮಣ್ಣ ಗೌಡ ಪುಚ್ಚೇರಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವನ್ನು, ಡೆಂಜ ಕಾಂಪ್ಲೆಕ್ಸ್ ಮಾಲಕ ಪುರಂದರ ಗೌಡ ಡೆಂಜ, ಇಂಜಿನಿಯರ್ ನರೇಶ್ ಡಿ.ಎಸ್., ಧನಂಜಯ ಗೌಡ ಆಲೆಕ್ಕಿ, ಕೊರಗಪ್ಪ ಗೌಡ ಕಲ್ಲಡ್ಕ, ಕರಿಯಪ್ಪ ಗೌಡ ಆಲಂಬಿಲ, ವೆಂಕಪ್ಪ ಗೌಡ ಆಲಂಬಿಲ, ಉಮೇಶ್ ಗೌಡ ನೆಲ್ಯಾಡಿ, ನೆಲ್ಯಾಡಿ ಶಿವ ಎಲೆಕ್ಟ್ರಾನಿಕ್ಸ್ನ ಪ್ರಶಾಂತ್, ದಯಾನಂದ ಪೊಜ್ಯಾಳ, ಯದುಶ್ರೀ ಡೆಂಜ, ವಿನಾಯಕ ರ್ಸ್ಮ ಮನೋಜ್ ಕುಮಾರ್, ವಾಮನ ಗೌಡ, ಚಂದ್ರಶೇಖರ ಡೆಂಜ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಆನಂದ ಗೌಡ ಪಿಲವೂರು, ಧರ್ಣಪ್ಪ ಗೌಡ ಕುದ್ರಾಜೆ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೆಲ್ಯಾಡಿ ಶಾಖೆಯಿಂದ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ಜಯಂತಕುಮಾರ್ ಅವರನ್ನು ಗೌರವಿಸಲಾಯಿತು.
ಸಂಘದ ನಿರ್ದೇಶಕರು, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರೂ ಆದ ಪ್ರವೀಣ್ ಕುಂಟ್ಯಾನ ಸ್ವಾಗತಿಸಿದರು. ನೆಲ್ಯಾಡಿ ಶಾಖಾ ಮೇನೇಜರ್ ವಿನೋದ್ ರಾಜ್ ಎಸ್. ವಂದಿಸಿದರು. ಸಂಘದ ಸಿಬ್ಬಂದಿಗಳಾದ ವಿಜಯಕುಮಾರ್ ಎಂ., ಅಜಿತ್ ಕುಮಾರ್ ಬಿ.ಕೆ., ಪಿಗ್ಗಿ ಸಂಗ್ರಾಹಕರಾದ ಶಿವಪ್ರಸಾದ್, ತಿರ್ಥೇಶ್ವರ ಯು.ಸಹಕರಿಸಿದರು.