ಪುತ್ತೂರು: ಎಲ್ಲರ ಸಹಕಾರದಿಂದ ಸಂಘ ನಿರಂತರವಾಗಿ ಬೆಳವಣಿಗೆ ಆಗುತ್ತಿದೆ. 2023-24 ರಲ್ಲಿ ಸಂಘದ ಒಟ್ಟು ಈ ವರ್ಷ 724 ಕೋಟಿಯಷ್ಟು ದಾಖಲೆಯ ವ್ಯವಹಾರ ಆಗಿದೆ. ಒಟ್ಟು ವ್ಯವಹಾರದಲ್ಲಿ 202 ಕೋಟಿ ರೂಪಾಯಿ ಹೆಚ್ಚು ವ್ಯವಹಾರ ನಡೆಸುವ ಮೂಲಕ ಖಾಸಗಿ ಸಹಕಾರ ಸಂಘದಲ್ಲೂ ಸ್ಪರ್ಧಾತ್ಮಕ ವ್ಯವಹಾರ ನಡೆಯುತ್ತಿದೆ. ಇದರಲ್ಲಿ ಸಿಬ್ಬಂದಿಗಳ ಕಾರ್ಯಕ್ಷಮತೆ ಇದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದ್ದಾರೆ.

ಪುತ್ತೂರು ಎಪಿಎಂಸಿ ಸಹಿತ ಪುತ್ತೂರು, ಕಾಣಿಯೂರು, ಬೆಳ್ಳಾರೆ, ಮಾಣಯಿ ಆರ್ಚ್ ಕಟ್ಟಡದಲ್ಲಿ ಒಕ್ಕಲಿಗ ಪ್ರಧಾನ ಕಚೇರಿಯಲ್ಲಿರುವ ಎಪಿಎಯ ಪಾದಾರ್ಪಣೆಯ ಶುಭ ಸಂದರ್ಭದಲ್ಲಿ ಜೂ.5ರಂದು ಸಂಘದ ಕಚೇರಿಯಲ್ಲಿ ಎಪಿಎಂಸಿ ಶಾಖೆ ಸ್ಥಳಾಂತರಗೊಂಡು 6ನೇ ವರ್ಷಕ್ಕೆ ಪಾದಾರ್ಪಣೆಯ ಶುಭ ಸಂದರ್ಭದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.
ವ್ಯವಹಾರದಲ್ಲೂ ದಾಖದೆ, ಡೆಪೋಸಿಟ್, ಸಾಲ ವಿತರಣೆ. ಸಾಲ ವಸೂಲಾತಿಯಲ್ಲೂ ದಾಖಲೆ ಮಾಡಿದ್ದೇವೆ. ಸಂಘದ ಒಟ್ಟು ಎಲ್ಲಾ ಶಾಖೆಗಳ ಡೆಪೋಸಿಟ್ 23.88 ಕೋಟಿ ಮಾಡುವಂತೆ ಗುರಿ ನೀಡಲಾಗಿತ್ತು. ಇದೀಗ 35.04 ಕೋಟಿಯಷ್ಟು ಡೆಪೋಟ್ ಪಡೆಯುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದ್ದಾರೆ. ಜೊತೆಗೆ ಸಾಲ ವಿತರಣೆಯಲ್ಲೂ 21.40 ಕೋಟಿ ರೂಪಾಯಿ ಗುರಿ ನೀಡಿದ್ದೆವು.. ಬೆಳವಣಿಗೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳ ಅಂಕಿಅಂಶದಲ್ಲಿ ಕಳೆದ ವರ್ಷಕ್ಕೇ ಶೇ.20 ಪ್ರೋಗ್ರೆಸ್ ಬಂದರೆ ಒಳ್ಳೆಯ ಸಂಸ್ಥೆಯೆಂಬ ಕ್ರೆಡಿಟ್ ಇದೆ. ಅದರಂತೆ ನಮ್ಮ ಸಂಸ್ಥೆ ಶೇ.37 ಆಗಿರುವುದಕ್ಕೆ ನಾವು ಸಂತೋಷ ಪಡುತ್ತಿದ್ದೇವೆ ಎಂದು ಹೇಳಿದರು.
ಬೇರೆ ಶಾಖೆಯಿಂದ ಪುತ್ತೂರು ಶಾಖೆಗೆ ವರ್ಗಾವಣೆಗೊಂಡವರನ್ನು ಸ್ವಾಗತಿಸಿ, ಗೌರವಿಸಲಾಯಿತು. ಇದೇ ಸಂದರ್ಭ ಸಂಘದ ಗೌರದ ಸಲಹೆಗಾರರು, ನಿರ್ದೇಶಕರನ್ನು,, ಪಿಗ್ಗಿ ಸಂಗ್ರಪಕರನ್ನು ಗೌರವಿಸಲಾಯಿತು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಮಾಜಿ ಶಾಸಕ ಸಂಜೀವ ಮಠಂದೂರು, ಸಂಘದ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ ಚಿನ್ನಪ್ಪ ಗೌಡ ಮಲುರೇಲು, ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಕೆ. ಶ್ರೀಧರ್ ಗೌಡ ಕಾಪಾಲು, ಸುಂದರ ಗೌಡ ನಡುಬೈಲು, ಸಂಧ್ಯಾ ಶಶಿಧರ್, ವಾರಿಜ ಬೆಳಿಯಪ್ಪ ಗೌಡ,, ನಾರಾಯಣ ಗೌಡ ಎಸ್. , ಇಂಜಿನಿಯರ್ ಶಿವರಾಮ ಗೌಡ ಮಕಾವು, ಸಾಫ್ಟ್ ವೇರ್ ಪ್ರಕಾಶ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ನಿವೃತ್ತ ಕಮಾಡೆಂಟ್ ರಾಮದಾಸ್, ಅಧ್ಯಕ್ಷೆ ಗೌರಿ ಬನ್ನೂರು, ಜಯರಾಮ ಗೌಡ, ಸಿಬ್ಬಂದಿ ಮಧುಕರ್, ಜಯರಾಮ ಗೌಡ, ಎಸ್.ಎನ್ ಎ ಶಾಖಾ ಮ್ಯಾನೇಜರ್ ನಿಶ್ಚಿತಾ ಮು.ಡಿ, ಕುಂಬ್ರ ಶಾಖಾ ಮ್ಯಾನೆಜರ್ ಹರೀಶ್ ರೈ, ವಿಟ್ಲದ ಶಾಖಾ ಮನೇಜರ್ ಜಯಂತ್, ಬೆಳ್ಳಾರೆ ಶಾಖಾ ಸಿಬ್ಬಂದಿ ಕಾವ್ಯ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಗಣಪತಿ ಹೋಮ ಮತ್ತು ಲಕ್ಷಿ ಪಡೆಯ ನೇತೃತನಲ್ಲಿ ನಡೆಯುತು ವಿಪಿಎಂಸಿ ಶಾಖಾ ಮ್ಯಾನೇಜರ್ ತೇಜಸ್ವಿನಿ, ಸಿಬ್ಬಂದಿಗಳಾದ ಅಮಿತಾ ಡಿ, ಶಿವಕುಮಾರ್, ದೀಕ್ಷಿತ್, ಶಿಲ್ಪಾ ಎ., ಯಶ್ವಿತ್, ಪಿಗ್ಮಿ ಸಂಗ್ರಹಕಾರರಾದ ಮೋಹನ್ ಗೌಡ, ಅನುರಾಧಾ, ಕುಸುಮಾಧರ ಸಹಕರಿಸಿದರು.
ಎಪಿಎಂಸಿ ಶಾಖೆಯ ವ್ಯವಹಾರ, ಸಾಲ ವಿತರಣೆ, ವಸೂಲಾತಿಯಲ್ಲಿ ಡೆಪೋಸಿಟ್ನಲ್ಲಿ ಗುರಿ ಮೀರಿದ ಸಾಧನೆ. ಕಳೆದ ವರ್ಷ ಎಪಿಎಂಸಿ ಶಾಖೆ ವ್ಯವಹಾರ 94.89 ಕೋಟಿ ರೂಪಾಯಿ ಇತ್ತು. ಈ 131.91 ಕೋಟಿ ವ್ಯವಹಾರ ಮಾಡುವ ಮೂಲಕ ಶೇ. 37 ಕೋಟಿ ವ್ಯವಹಾರ ಹೆಚ್ಚು ಮಾಡಿದೆ. ಸಾಲ ವಸೂಲಾತಿಯಲ್ಲೂ 98.48 ಕೋಟಿ ರೂ. ಸಾಧನೆ ಮಾಡಿದೆ. 8.73 ಕೋಟಿ ರೂ. ಸಾಲ ವಿತರಿಸುವ ಮೂಲಕ ಶೇಕಡವಾರು 339ಕೋಟಿ ಮಚ್ಚು ಗುರಿ ಮೀರಿದ ಸಾಧನೆ ಮಾಡಿದೆ. ಡೆಪೋಸಿಟ್ ಗೆ 3.25 ಗುರಿ ನೀಡಿದ್ದೆವು. ಅದನ್ನು ಡಬರ್ ಮಾಡಿಕೊಂಡು ರೂ.7.15 ಕೋಟಿ ಡೆಪೋಸಿಟ್ ಮಾಡುವ ಶೇ. 220 ಬೆಳವಣಿಗೆ ಮಾಡಿಕೊಂಡಿದ್ದಾರೆ.
- ಚಿದಾನಂದ ಬೈಲಾಡಿ, ಅಧ್ಯಕ್ಷರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ