ರಾಜ್ಯ ಸರಕಾರ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳನ್ನು, ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಕಾರ್ಯಕ್ಕೆ ಇಳಿದಿದೆ, ನಿಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂಗಳ ಮೇಲೆ ಸವಾರಿ ಮಾಡಿ, ನಮ್ಮನ್ನು ಕೆಣಕಿದರೆ ನಾವು ಸಮ್ಮನೆ ಇರುವುದಿಲ್ಲ, ನಿಮ್ಮ ಷಡ್ಯಂತರಕ್ಕೆ ತಕ್ಕ ಉತ್ತರ ನೀಡಿಯೇ ನೀಡುತ್ತೇವೆ ಎಂದು ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದರು.
ಅವರು ಬುಧವಾರ ಸಂಜೆ ಕಡಬ ಠಾಣೆಯ ಎದರು ಹಿಂದೂ ಕಾರ್ಯಕರ್ತರ ಮನೆಗೆ ಕಡಬ ಪೋಲೀಸರು ರಾತ್ರಿ ತೆರಳಿ ಜಿಪಿಎಸ್ ಫೊಟೋ ತೆಗೆದುದಲ್ಲದೆ, ಇದನ್ನು ಪ್ರಶ್ನಿಸಿದ ಹಿಂದೂ ಕಾರ್ಯಕರ್ತರ ಮೇಲೆ ಸೊಮೊಟೋ ಕೇಸ್ ದಾಖಲಿಸಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಯಾವುದೇ ಪ್ರಕರಣಗಳಿಲ್ಲದ ಕಾರ್ಯಕರ್ತ ಪುನೀತ್ ಅವರ ಮನೆಗೆ ತಡ ರಾತ್ರಿ ನುಗ್ಗಿರುವ ಇಲ್ಲಿನ ಠಾಣಾಧಿಕಾರಿ ಅಕ್ಷಯ್ ಡವಗಿ ನಿನ್ನ ಮೇಲೆ ರೌಡಿಶೀಟರ್ ಓಪನ್ ಮಾಡುತ್ತೇನೆ ಎಂದು ದಮ್ಕಿ ಹಾಕುತ್ತಾರೆ. ಹಿಂದೂ ಸಮಾಜದ ರಕ್ಷಣೆಗೆ ಕೆಲಸ ಮಾಡುವ ಕಾರ್ಯಕರ್ತರನ್ನು ರೌಡಿಶೀಟರ್ ಮಾಡುವುದಿದ್ದರೆ ನೀವು ಸಂವಿಧಾನ ರಕ್ಷಣೆ ಮಾಡುತ್ತೀರಾ ಅಥವಾ ಯಾರದ್ದೂ ಒತ್ತಡಕ್ಕೆ ಮಣಿದು , ದುಡ್ಡಿನ ಆಸೆಗೆ, ಭಡ್ತಿಗೋಸ್ಕರ ಈ ಕಾರ್ಯ ಮಾಡುತ್ತೀರಾ ಎಂದು ಪ್ರಶ್ನಿಸಿದ ಮುರಳಿಕೃಷ್ಣ ಹಸಂತಡ್ಕ ಗೋಕಳ್ಳರು, ಅತ್ಯಾಚಾರಿಗಳನ್ನು ಏನೂ ಮಾಡಲು ಸಾಧ್ಯವಾಗದÀ ನೀವು ಈ ರಾಷ್ಟçಕ್ಕೋಸ್ಕರ, ಧರ್ಮಕ್ಕೋಸ್ಕರ ನಿಸ್ವಾರ್ಥ ಸೇವೆ ಮಾಡುವ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ಅದರ ನೇರ ಪರಿಣಾಮ ಎದುರಿಸಬೇಕಾಗುತ್ತದೆ. ಆಹೋರಾತ್ರಿ ಹೋರಾಟ ಮಾಡಬೆಕಾದೀತು, ಎಷ್ಟೇ ಪ್ರಕರಣ ದಾಖಲಿಸಿದರೂ ನಾವು ಹಿಂಜರಿಯುವುದಿಲ್ಲ ಎಂದರು.
ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ವಳಲಂಬೆ ಮಾತನಾಡಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಹಿಂದೂಗಳು ಶಾಂತಿ ಪ್ರಿಯರು ಅವರನ್ನು ಕೆಣಕಿದರೆ ಕ್ಷೇತ್ರದ ಪ್ರತೀ ಬೂತ್ನಿಂದ ಸಾವಿರಾರು ಹಿಂದೂ ಕಾರ್ಯಕರ್ತರು ಎದ್ದು ನಿಲ್ಲುತ್ತಾರೆ. ನೀವು ಕೆಲವರ ಮೇಲೆ ಪ್ರಕರಣ ದಾಖಲಿಸಬಹುದು ಆದರೆ ಹೊರಗಡೆ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ ಎನ್ನುವದು ನಿಮ್ಮ ಗಮನದಲ್ಲಿರಲಿ, ಪೋಲೀಸ್ ಇಲಾಖೆ ತಮ್ಮ ಬೇಜವಾಬ್ದಾರಿ ಕೆಲವನ್ನು ನಿಲ್ಲಿಸಬೇಕು, ತಪ್ಪಿದಲ್ಲಿ ಮುಂದೆ ಆಗುವ ಅನಾಹುತಕ್ಕೆ ನೀವೆ ಕಾರಣರಾಗುತ್ತೀರಿ ಎಂದು ಎಚ್ಚರಿಸಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ ಕಡಬ ಪೋಲೀಸರಿಗೆ ಮುಸ್ಲಿಂ ಮನೆಗ ಹೋಗಲು ಮೀಟರ್ ಇಲ್ಲ. ಅವರ ಮನಗೆ ಹೋದರೆ ಅಲ್ಲಿ ಮಹಿಳೆಯರು ಪೋಲೀಸರಿಗೆ ತಳುವಾರ್ ಹಿಡಿಯುತ್ತಾರೆ. ಕಲ್ಲು ಹೊಡೆಯುತ್ತಾರೆ. ಅವರಿಗೆ ಹೆದರಿ ಹಿಂದೂ ಕಾರ್ಯಕರ್ತರ ಮನೆಗೆ ಹೋಗುತ್ತಾರೆ, ಅತ್ಯಾಚಾರವಾದ ಹೆಣ್ಣು ಮಗಳಿಗೆ ನೋಟೀಸ್ ಕೊಡುವ ನೆಪದಲ್ಲಿ ಪೋಲೀಸ್ ಆಕೆಯನ್ನು ಅತ್ಯಾಚಾರ ಮಾಡಿದ ಇತಿಹಾಸ ಇರುವ ಕಡಬ ಪೋಲೀಸರಿಗೆ ಯಾವು ನೈತಿಕತೆ ಇದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ ಮಾತನಾಡಿ ರಾತ್ರಿ ಹೊತ್ತು ನಮ್ಮ ಕಾರ್ಯಕರ್ತರ ಮನೆಗೆ ತೆರಳಿ ದಬ್ಬಾಳಿಕೆ ನಡೆಸಿದರೆ ಮನೆಯ ಮಾತೆಯರು ದುರ್ಗೆಯರಾಗಬೇಕಾಗುತ್ತದೆ, ಇದಕ್ಕೆ ಅವಕಾಶ ನೀಡಬೇಡಿ, ತಕ್ಷಣ ರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ತೆರಳುವುದನ್ನು ನಿಲ್ಲಿಸಿ ಎಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಮುಖಂಡರಾದ ಮೋಹನ್ ದೋಳ್ಪಾಡಿ, ಶ್ರೀಧರ ತೆಂಕಿಲ, ರಾಧಾಕೃಷ್ಣ ಕೋಲ್ಪೆ, ಅಶ್ವಿತ್ ಕಂಡಿಗ, ಪ್ರಮೋದ್ ರೈ ನಂದುಗುರಿ, ವಾಸುದೇವ ಭಟ್ ಕಡ್ಯ, ವಾಸುದೇವ ಕೊಲ್ಲೆಸಾಗು, ಉಮೇಶ್ ಶೆಟ್ಟಿ ಸಾಯಿರಾಮ್, ಮೋಹನ್ ಕೆರೆಕ್ಕೋಡಿ, ವೀಣಾ ರಮೇಶ್, ರಘುರಾಮ ನಾಯ್ಕ್, ಕಿಶೋರ್ ಶಿರಾಡಿ, ಹೇಮಲತಾ ಕೇಪುಂಜ, ಪ್ರಮೀಳಾ ಲೋಕೇಶ್, ಬಿಜೆಪಿ ಮುಖಂಡರಾದ ಆಶಾ ತಿಮ್ಮಪ್ಪ ಗೌಡ, ಶ್ರೀ ಕೃಷ್ಣ ಎಂ.ಆರ್., ಪ್ರದೀಪ್ ರೈ ಮನವಳಿಕೆ, ಸುರೇಶ್ ದೇಂತಾರು, ಲಕ್ಷೀ ನಾರಾಯಣ ರಾವ್, ಪ್ರಕಾಶ್ ಎನ್.ಕೆ. ಪ್ರಕಾಶ್ ಕೆಮ್ಮಾರ, ರಾಮಣ್ಣ ಗೌಡ ಜಾಲ್ತಾರು, ಶಶಾಂಕ್ ಗೋಖಲೆ, ಮತ್ತಿತರರು ಭಾಗವಹಿಸಿದ್ದರು. ವಿಶಾಕ್ ಪುತ್ತೂರು ಸ್ವಾಗತಿಸಿ , ವಂದಿಸಿದರು. ಬಳಿಕ ಮಹಿಳೆಯರು ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.