ವಿಟ್ಲ : ತಾಲೂಕಿನ ಅಳಿಕೆ ವಲಯದ ನಿರ್ಕಜೆ ಕಾರ್ಯ ಕ್ಷೇತ್ರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು.
ಅಳಿಕೆ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿಯವರ ನೇತೃತ್ವದಲ್ಲಿ ವಲಯ ಮಟ್ಟದಲ್ಲಿ ಆಯೋಜನೆ ಮಾಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಪು ಪಂಚಾಯತ್ ಅಧ್ಯಕ್ಷರು ರಾಘವ ಸಾರಡ್ಕ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ- 2 ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗೋಕುಲ ದಾಸ್ ಭಕ್ತ, ಸತ್ಯನಾರಾಯಣ ಭಟ್, ಡಾ. ಶಾಂತರಾಜ್, ಡಾ. ಅಶ್ವಿನಿ ಸಾಗರ್, ಜಗಜೀವನ್ ರಾಮ್ ಶೆಟ್ಟಿ, ವಿನಯ ಕುಮಾರ್, ಹೇಮಾವತಿ, ಒಕ್ಕೂಟ ಅಧ್ಯಕ್ಷರಾದ ಭವ್ಯ, ತಾಲ್ಲೂಕು ಯೋಜನಾಧಿಕಾರಿ ಸುರೇಶ್, ವಲಯಧ್ಯಕ್ಷರಾದ ರಾಜೇಂದ್ರ ರೈ, ಸಂತೋಷ, ಮೊದಲಾದ ಗಣ್ಯರು ಹಾಗೂ ಸಂಘದ ಸದಸ್ಯರು, ಶಾರ್ಯ ವಿಪತ್ತು ಸದಸ್ಯರು, ಬೇರೆ ಬೇರೆ ಸಂಘ ಸಂಸ್ಥೆ ಸದಸ್ಯರು, ಜ್ಞಾನ ವಿಕಾಸ ಸಮನ್ವಧಿಕಾರಿ ದೀಪ, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.