ಪುತ್ತೂರು: ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ದ.ಕ.ಜಿಲ್ಲೆ ಇದರ ಸರ್ವ ಸದಸ್ಯರುಗಳ ಪ್ರಥಮ ಮಹಾ ಅಧಿವೇಶನ ಹಾಗೂ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ,. ಮಾತೃ ಸಂಘದ ಸಮಾವೇಶ ಪ್ರಥಮವಾಗಿದೆ. ಕುರುಂಜಿ ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಆರಂಭಗೊಂಡಿರುವುದು ಸಂತೋಷ ತಂದಿದೆ. ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಕುರಿತು ಒಕ್ಕಲಿಗ ಸಂಘದ ಪ್ರತಿಯೊಬ್ಬರಿಗೂ ತಿಳಿಯಬೇಕು. ಕೆಂಪೇಗೌಡ ಆಚರಣೆ ಮಾಡಲು ಒಕ್ಕಲಿಗ ಸಂಘದವರು ಮುಖ್ಯಮಂತ್ರಿಯಿಂದ ಆಹ್ವಾನ ಬಂದಿದೆ ಎಂದು ತಿಳಿಸಿದ ಅವರು, ಮಾತೃ ಸಂಘ ತಾಯಿಗೆ ಸಮಾನ. ಯಾವುದೇ ಒಕ್ಕಲಿಗರ ಬಗ್ಗೆ ಸಮಸ್ಯೆ ಉಂಟಾದರೆ ಮುಷ್ಕರದಲ್ಲಿ ಪಾಲ್ಗೊಳ್ಳುವುದು, ಸಭೆ ಕರೆಯುವುದು ಮಾಡಬೇಕಾದರೆ ಮಾತೃ ಸಂಘಕ್ಕೆ ಒಗ್ಗಿಕೊಂಡಿರಬೇಕು. ಇದರ ಹಿಂದೆ ನಾವು ಸದಾ ಇದ್ದೇವೆ. ದ.ಕ.ಜಿಲ್ಲಾ ಸಂಘಕ್ಕೆ ಏನು ಸಹಕಾರ ಬೇಕು. ಅದಕ್ಕೆ ಸಹಕಾರ ನೀಡುತ್ತೇನೆ. ಸಮಾಜವನ್ನು ಹುರಿದುಂಬಿಸುವ ಕೆಲಸ ಮಾಡಬೇಕು. ಕಡೆಗಣಿಸಬಾರದು. ಸಂಘಟನೆಗಾಗಿ, ಒಗ್ಗಟ್ಟಿಗಾಗಿ ಸಂಘ ರಚನೆ ಮಾಡಿದ್ದೇವೆ ಎಂದರು.
ಸಂಸ್ಕೃತಿ, ಸಂಸ್ಕಾರ ಅಳಿಯಬಾರದು. ಮುಂದಿನ ಪೀಳಿಗೆಗೆ ತಿಳಿಸಬೇಕಾದ ಅಗತ್ಯವಿದೆ ಎಂದ ಅವರು, ಜಿಲ್ಲಾ ಸಂಘದ ಹಾಗೆ ರಾಜ್ಯ ಒಕ್ಕಲಿಗ ಸಂಘಕ್ಕೆ ಸದಸ್ಯತನ ಆನ್ಲೈನ್ನಲ್ಲಿ ನೋಂದಾವಣೆ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಸದಸ್ಯತನಕ್ಕೆ ನೋಂದಾವಣೆ ಮಾಡಬೇಕೆಂದು ಅವರು ವಿನಂತಿಸಿದರು.
ಸಮಾರಂಭದಲ್ಲಿ ಪೂವಾಜೆ ಕುಶಾಲಪ್ಪ ಗೌಡ, ಹರೀಶ್ಇಂಜಾಡಿ, ಚಂದ್ರಾ ಕೋಲ್ಚಾರ್, ವೀರಪ್ಪ ಗೌಡ, ಭರತ್ ನೆಕ್ರಾಜೆ, ಡಾ.ದಾಮೋದರ ಮಾರಾವು ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಗೌರವಾರ್ಪಣಾ ಕಾರ್ಯಕ್ರಮವನ್ನು ಕಿಶೋರ್ ಕುಮಾರ್ ನೆಲ್ಲಿಕಟ್ಟೆ ನೆರವೇರಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ, ಸುಳ್ಯ ತಾಲೂಕು ಅಧ್ಯಕ್ಷ ಪಿ.ಎಸ್.ಗಂಗಾಧರ ಗೌಡ, ಬಂಟ್ವಾಳ ತಾಲೂಕು ಅಧ್ಯಕ್ಷ ಸಿ.ಕೆ.ಕುಶಾಲಪ್ಪ ಗೌಡ, ಭರತ್ ಮುಂಡೋಡಿ, ಎನ್.ಎ.ರಾಮಚಂದ್ರ, ಜಾಕೆ ಮಾಧವ ಗೌಡ, ಭಾಸ್ಕರ ಗೌಡ ಕೋಡಿಂಬಾಳ, ಸೋಮೇಗೌಡ, ಮಂಗಳೂರಿನ ನ್ಯಾಯವಾದಿ ಪೂರ್ಣಿಮಾ ಗೌಡ, ಮಂಗಳೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸೌಮ್ಯ ಸುಕುಮಾರ್, ಬೆಳ್ತಂಗಡಿ ಸಂಘದ ಕೋಶಾಧಿಕಾರಿ ಪದ್ಮಗೌಡ ಬೆಳ್ಗಂಗಡಿ, ಮಾತೃ ಸಂಘದ ಕಾರ್ಯದರ್ಶಿ ರಾಮಣ್ಣ ಗೌಡ ಕೊಂಡೆಬಾಯಿ, ಕಾರ್ಯದರ್ಶಿ ಕಿಶೋರ್ ನೆಲ್ಲಿಕಟ್ಟೆ,, ನಿತ್ಯಾನಂದ ಮುಂಡೋಡಿ, ಮಾತೃ ಸಂಘದ ಉಪಾಧ್ಯಕ್ಷ ರಾಮದಾಸ್ಗೌಡ, ಚಂದ್ರಶೇಖರ ಗೌಡ, ತಿಮ್ಮಪ್ಪ ಗೌಡ ಕಡಬ, ಲಕ್ಷ್ಮಣ ಗೌಡ ಕುಂಟಿಕಾನ ಉಪಸ್ಥಿತರಿದ್ದರು.
ಒಕ್ಕಲಿಗ ಯಾನೆ ಗೌಡರ ಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಕೆ ಅಳಿಕೆ ಸ್ವಾಗತಿಸಿದರು.
6ix7hc