ಪುತ್ತೂರು : ತಾಲೂಕಿನ ಬೆಳ್ಳಿಪಾಡಿ ಗ್ರಾಮದಲ್ಲಿ ಭೀಕರ ಭೂಕುಸಿತವಾಗಿದ್ದು, ಬೆಳ್ಳಿಪ್ಪಾಡಿ ಕಠಾರ ಕೋಟೆಲು ಭಾಗಕ್ಕೆ ಸಂಪರ್ಕಿಸುವ ಸಕಲೇಶ್ವರ ದೇವಸ್ಥಾನದ ಬಳಿ ಇರುವ ಗುತ್ತಿನಮನ ಎಂಬಲ್ಲಿ ರಸ್ತೆಗೆ ಧರೆ ಕುಸಿದುಬಿದ್ದು ದರಿಂದ ಸಂಪರ್ಕ ಕಡಿತವಾಗಿದೆ .
ಮಣ್ಣು ಕೆಳಗಿನ ತೋಟಗಳಿಗೂ ನುಗ್ಗಿದೆ. ಎರಡು ವರ್ಷಗಳ ಹಿಂದೆಯೂ ಇದೆ ಸ್ಥಳದಲ್ಲಿ ಭೂಕುಸಿತ ಸಂಭವಿಸಿದ್ದು, ಮೇಲ್ಬಾಗದಲ್ಲಿ ಎರಡು ಮನೆಗಳು ತೀರ ಅಪಾಯಕಾರಿ ಸ್ಥಿತಿಯಲ್ಲಿವೆ.
ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ರಸ್ತೆಯನ್ನು ಉಪಯೋಗಿಸುವಂತೆ ಸ್ಥಳೀಯರು ತಿಳಿಸಿದ್ದಾರೆ. ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಇಲ್ಲಿಗೆ ಸೂಕ್ತ ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಊರವರು ಒತ್ತಾಯಿಸಿದ್ದಾರೆ.
8q7uno
wwh6ul