ಪುತ್ತೂರು : ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾರಂಭೋತ್ವವ ಮೇ 30 ರಂದು ಗಣಪತಿ ಹವನದ ಮೂಲಕ ಆರಂಭಿಸಲಾಯಿತು.
ಪೋಷಕ ಹರಿಪ್ರಸಾದ್ ವೈಲಾಯ ಮತ್ತು ಬಳಗದವರು ಯಜ್ಞ ಕಾರ್ಯ ನೆರವೇರಿಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ. ದಂಪತಿ ಹವನದ ಕರ್ತೃತ್ವ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.