ಪುತ್ತೂರು : ಮಾತೃಶ್ರೀ ಕ್ರಿಯೇಷನ್ ಅರ್ಪಿಸುವ ಚಲನಚಿತ್ರ ನಟ ಆರ್ಯನ್ ಇವರ ಸಹಕಾರದಲ್ಲಿ ಅಶ್ವಥ್ ಎನ್ ಪುತ್ತೂರು ಇವರ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಮೋಡಿಬಂದ ವಿಭಿನ್ನ ಕಥಾಧಾರಿತವಾದ “ಅಸ್ಮಿತ” ಕಿರುಚಿತ್ರದ ಪೋಸ್ಟರನ್ನು ಅಭಿನಯ ಆರ್ಟ್ಸ್ ತಂಡದ ನಿರ್ದೇಶಕರಾದ ಜಿಲ್ಲಾ ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾಚತುರ ಕೇಶವ ಮಚ್ಚಿಮಲೆ ಬಿಡುಗಡೆ ಮಾಡಿದ್ದು, ಇದೀಗ ಕನ್ನಡ, ತುಳು ತೆನ್ಕಾಯಿ ಮಲೆ ಸಿನಿಮಾದ ಖ್ಯಾತ ನಿರ್ದೇಶಕರಾದ ರವೀಚಂದ್ರ ಮುಂಡೂರು ಟ್ರೈಲರನ್ನು ಬಿಡುಗಡೆ ಮಾಡಿದ್ದಾರೆ.

“ಅಸ್ಮಿತ” ಕಿರುಚಿತ್ರ ಟ್ರೈಲರ್ ಮೂಲಕ ವಿಭಿನ್ನತೆಯನ್ನು ತೋರಿಸಿದ್ದು, ಈ ಕಿರುಚಿತ್ರ ಕುತೂಹಲಕಾರಿಯನ್ನು ಮೂಡಿಸಿದೆ.
ಸೌಮ್ಯ , ಅಜೀತ್ ಕಾವು, ಮಾನ್ಯ ಹಾಸನ್ ಯೋಗೀಶ್ ಕುಂಬ್ರ ನಟಿಸಿದ್ದು, ಅಸ್ಮಿತ ಕಿರುಚಿತ್ರ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕರಾದ ಅಶ್ವಥ್ ಎನ್ ಪುತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
upjle0