ಪುತ್ತೂರು: ಯುವಕನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ ಘಟನೆ ನಿನ್ನೆ ಪಾಣಾಜೆ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿ ಅರ್ಲಪದವು ನಿವಾಸಿ ಪ್ರಕಾಶ್ (28) ಎನ್ನಲಾಗಿದೆ. ಹಲ್ಲೆ ಮಾಡಿದ ಆರೋಪಿಗಳು ಧನಂಜಯ ಮತ್ತು ಪುನೀತ್ ಎಂದು ತಿಳಿದು ಬಂದಿದೆ.
ಪಾಣಾಜೆ ಗ್ರಾಮದ ವೈನ್ ಶಾಪ್ ನಿಂದ ಬಿಯರ್ ಬಾಟಲಿಯನ್ನು ಖರೀದಿ ಮಾಡಿ, ವೈನ್ ಶಾಪ್ ನಲ್ಲಿ ಇರುವ ಶೆಡ್ ನಲ್ಲಿದ್ದ ಚಯರ್ನಲ್ಲಿ ಕುಳಿತು ಬಿಯರ್ ಕುಡಿಯುತ್ತಿದ್ದ ವೇಳೆ ಪರಿಚಯದವರಾದ ಧನಂಜಯ ಮತ್ತು ಪುನೀತ್ ಎಂಬುವವರು ಬಂದಿದ್ದರು. ಬಂದ ನಂತರ ಜಗಳ ಪ್ರಾರಂಭ ಮಾಡಿದ್ದಾರೆ. ಜಗಳ ಪ್ರಾರಂಭವಾಗುತ್ತಿದ್ದಂತೆ ಟೇಬಲ್ ಮೇಲೆ ಇದ್ದ ಬಿಯರ್ ಬಾಟಲಿಯಿಂದ ಧನಂಜಯ್, ಪ್ರಕಾಶ್ ರವರ ತಲೆಗೆ ಹೊಡೆದಿದ್ದು, ಪುನೀತ್ ಕೈಯಿಂದ ಹೊಡೆದಿದ್ದಾನೆ. ಪ್ರಕಾಶ್ ಬಲಕಾಲಿಗೆ ತುಳಿದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ನೋವಿನಿಂದ ಪ್ರಕಾಶ್ ಬೊಬ್ಬೆ ಹೊಡೆಯುತ್ತಿದ್ದಂತೆ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಯ ನಂತರ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪ್ರಕಾಶ್ ಅವರ ಅಣ್ಣ , ಪ್ರಕಾಶ್ ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಗಾಯಾಳು ಪ್ರಕಾಶ್ ನೀಡಿರುವ ದೂರಿನ ಪ್ರಕಾರ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.