ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಈಗಾಗಲೇ ನೂತನ ಆಡಳಿತ ಮಂಡಳಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಅಧ್ಯಕ್ಷರಾದ ಹರೀಶ್ ಇಂಜಾಡಿಯವರು ರೌಶಿಡೀಟರ್ ಎಂಬ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ರವಾನೆಯಾಗುತ್ತಿದ್ದು, ಇದು ಸತ್ಯಕ್ಕೆ ದೂರವಾಗಿ. ಮುಂದಿನ ದಿನಗಳಲ್ಲಿ ಈ ಕುರಿತು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನೆಯಾದರೆ ನಾವು ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಸರಕಾರದ ಗ್ಯಾರಂಟಿ ಅನುಷ್ಠಾನ ಯೋಜನೆಯ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವರಾಮ ರೈ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಕಡಬ ಬ್ಲಾಕ್ ಕಾಂಗ್ರೆಸ್ ಹಾಗೂ ಸುಬ್ರಹ್ರಮಣ್ಯ ಗ್ರಾಮ ಸಮಿತಿ ಜಂಟಿಯಾಗಿ ಸುಬ್ರಹ್ಮಣ್ಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ, ಈಗಾಗಲೇ ದೇವಸ್ಥಾನಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆಯಾಗಿ ಅಧ್ಯಕ್ಷರ ಆಯ್ಕೆ ಸರ್ವಾನುಮತದಿಂದ ನಡೆದಿದೆ. ಆಯ್ಕೆ ಪ್ರಕ್ರಿಯೆಯನ್ನು ಸೂಚನೆ, ಅನುಮೋದನೆ ಮೂಲಕ ಮಾಡಲಾಗಿದೆ. ಸಮಿತಿ ರಚನೆಯಾದ ತಕ್ಷಣ ಜಿಲ್ಲಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಕರೆಸಿ ಅಧ್ಯಕ್ಷರನ್ನು ನಿಮ್ಮೊಳಗೆ ಆಯ್ಕೆ ಮಾಡಿ ಎಂದು ಸೂಚನೆ ನೀಡಿದ್ದ ಹಿನ್ನಲೆಯಲ್ಲಿ ಹರೀಶ್ ಇಂಜಾಡಿ ಅವರನ್ನು ಸವಾರ್ನುಮತದಿಂದ ಆಯ್ಕೆ ಮಾಡಾಗಿದೆ. ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲೂ ನಾವು ಭಾಗವಹಿಸಿದ್ದೇವೆ ಎಂದು ತಿಳಿಸಿದರು.
ಹರೀಶ್ ಇಂಜಾಡಿ ಅವರು ಸತತ ಮೂರು ಬಾರಿ ಸುಬ್ಹಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಯಶಸ್ವಿ ಸದಸ್ಯರಾಗಿ ಪಕ್ಷ ಸಂಘಟನೆಯಲ್ಲಿ ಗರುತಿಸಿಕೊಂಡ ವ್ಯಕ್ತಿ. ಆದರೆ ಅವರು ಕುರಿತು ಸಾರ್ವಜನಿಕರಲ್ಲಿ ಗೊಂದಲದ ವಿಚಾರ ತಿಳಿದು ಬಂದಿದೆ. ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಸಂಪೂರ್ಣ ಬೆಂಬಲ ಸೂಚಿಸಿ ಅವರು ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಏನು ಪಣತೊಟ್ಟಿದ್ದಾರೆ ಅದಕ್ಕೆ ನಮ್ಮ ಸಹಕಾರ ಇದೆ. ಸಂಪೂರ್ಣ ಬೆಂಬಲ ನೀಡಿ ಅಭಿವೃದ್ಧಿ ಮಾಡಿ ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿನ ಅವರ ಚಿಂತನೆಗಳಿಗೆ ಬ್ಲಾಕ್ ಕಾಂಗ್ರೆಸ್ ಅಭಿನಂದನೆ ಸಲ್ಲಿಸಿದೆ ಎಂದು ತಿಳಿಸಿದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಧ್ಯಕ್ಷ ವಿರುದ್ಧ ಇಲ್ಲಸಲ್ಲದ ವಿಚಾರಗಳು ಹರಡುತ್ತಿರುವುದು ಬಹಳಷ್ಟು ನೋವಿನ ವಿಚಾರವಾಗಿದೆ. ಈ ಕುರಿತು ನಾವು ಏನು ಹೇಳುವುದೆನೆಂದರೆ 9 ಜನ ಸದಸ್ಯರನ್ನು ಅವರ ಚಲನವಲಗಳನ್ನು ಗಮನಿಸಿ, ಪೊಲೀಸ್ ವೆರಿಫಿಕೇಶನ್ ಮಾಡಲಾಗಿದೆ. ಆರು ತಿಂಗಳ ಕಾಲ ಈ ಪ್ರಕ್ರಿಯೆ ನಡೆದಿದೆ. ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಒಳ್ಳೆಯ ಚಿಂತನೆ ಇಟ್ಟುಕೊಂಡು ಆಡಳಿತ ಮಂಡಳಯಲ್ಲಿ ಕೆಲಸ ಮಾಡುತ್ತಿ ಅವರ ಕೈಕಟ್ಟಿ ಹಾಕು ಹುನ್ನಾರ ನಡೆಯುತ್ತಿದೆ. ಹರೀಶ್ ಇಂಜಾಡಿ ಅವರು ಭೌಗೋಳಿಕವಾಗಿ ಗ್ರಾಮ ಪಂಚಾಯತ್ ನಲ್ಲಿ ಯಾವುದ ಕೆಲಸಗಳು ಆಗಬೇಕು ಎಂಬುದನ್ನು ಮಾಡಿದ್ದಾರೆ. ಯಾವುದೇ ಒಂದು ಗಲಾಟೆಗೆ ಹೋದವರಲ್ಲ. ಇದೀಗ ರೌಡಿ ಶೀಟರ್ ಎನ್ನುತ್ತಿರುವುದಕ್ಕೆ ಅರ್ಥವಿಲ್ಲ. ಮೊದಲಿಗೆ ಪೂರ್ವಾಪರ ತಿಳಿದುಕೊಳ್ಳಬೇಕು. ಕಳೆದ 25 ವರ್ಷಗಳಿಂದ ಅವರು ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಹತ್ತಿರದಿಂದ ಭಕ್ತಾದಿಗಳನ್ನು ನೋಡವ ಅಧ್ಯಕ್ಷರು. ಆದರೆ ಇತ್ತೀಚೆಗೆ ಅಧಿಕಾರಿಗಳು ಶ್ರೀ ಕ್ಷೇತ್ರಕ್ಕೆ ಬಂದಿದ್ದು, ಮೂರ್ತಿ ಖರೀದಿ ವಿಚಾರದ ಬಗ್ಗೆ ರೇಟಿನಲ್ಲಿ ಚರ್ಚೆ ಆಗುತ್ತದೆ. ಈ ಸಂದರ್ಭ ಅಧಿಕಾರಿಗಳಿಂದ ಮೂರ್ತಿ ಬಿಸಾಡುವ ಕೆಲಸ ಆಗುತ್ತದೆ. ಈ ವಿಚಾರದಲ್ಲಿ ಹೊರಗೆ ಹೋದ ಅಧಿಕಾರಿಗಳು ಅಧ್ಯಕ್ಷರ ಮೇಲೆ ಪ್ರಕರಣ ದಾಖಲಿಸಿ ರೌಡಿಶೀಟರ್ ನ್ನಾಗಿ ಬಿಂಬಿಸುವ ಕೆಲಸ ಮಾಡಿದ್ದಾರೆ. ಇದು ಸತ್ಯ ವಿವಾರ ಎಂದು ತಿಳಿಸಿದ್ದಾರೆ.
ಮಾಧ್ಯಮದವರು ತಿಳಿದುಕೊಂಡು ಅಧಿಕಾರಿಗಳು ಮಾಹಿತಿ ನೀಡಿದರೆ ಮಾತ್ರ ಪ್ರಕಟಿಸಬೇಕು. ಸುಮ್ನೆ ತೇಜೋವಧೆ ಮಾಡುವಂತಹದ್ದು, ದೇವಸ್ಥಾನಕ್ಕೆ ಕಪ್ಪುಚುಕ್ಕೆ ಮಾಡುವಂತದ್ದು ದೇವರು ಕ್ಷಮಿಸುವುದಿಲ್ಲ. ಈ ನಿಟ್ಟಿನಲ್ಲಿ ಸಮಸ್ತ ಭಕ್ತಾದಿಮಾನಿಗಳು ತಪ್ಪು ಮಾಹಿತಿಗಳಿಗೆ ತಲೆಕೊಡಬೇಡಿ ಎಂದು ತಿಳಿಸಿದರು.