ಭಾರತ – ಪಾಕಿಸ್ತಾನ ಮಧ್ಯೆ ಇದ್ದ ಕದನ ವಿರಾಮವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿ ಭಾರತದ ಮೇಲೆ ಜಮ್ಮುವಿನಲ್ಲಿ ದಾಳಿ ಮಾಡಿದೆ. ಈ ದಾಳಿಯಲ್ಲಿ ಓರ್ವ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದು, 7 ಮಂದಿ ಸೈನಿಕರಿಗೆ ಗಾಯಗಳಾಗಿವೆ ತಿಳಿದು ಬಂದಿದೆ.
ಜಮ್ಮುವಿನ ಆರ್ಎಸ್ ಪುರದಲ್ಲಿ ನಡೆದ ಶೆಲ್ ದಾಳಿಯಲ್ಲಿ ಬಿಎಸ್ಎಫ್ ಎಸ್ಐ ಎಂಡಿ ಮೊಹಮ್ಮದ್ ಇಮ್ಮಿಯಾಜ್ ಹುತಾತ್ಮರಾಗಿದ್ದಾರೆ. ಹಾಗೂ 7 ಸೈನಿಕರಿಗೆ ಗಾಯಗಳಾಗಿವೆ. ಅನಿರೀಕ್ಷಿತವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದರಿಂದ ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಕೆಲವೆಡೆ ದಾಳಿಗಳು ನಡೆದಿವೆ.
ನಿಯಮ ಉಲ್ಲಂಘನೆ ಮಾಡಿ ಕದನ ಆರಂಭಿಸಿದ ಪಾಕಿಸ್ತಾನ ನಂಬಿಕೆಗೆ ಅನರ್ಹ ಎಂಬುವುದನ್ನು ಮತ್ತೇ ಸಾಬೀತಾಗಿದೆ ಎನ್ನಲಾಗಿದೆ.