ಕಾಶ್ಮೀರದ ಪಹಲ್ಗಾಮಾದಲ್ಲಿ ನಡೆದ ಹಿಂದೂಗಳ ಹತ್ಯೆ ಪ್ರಕರಣ ಖಂಡಿಸಿ ಬೆಳ್ಳಾರೆಯಲ್ಲಿ ಬೃಹತ್‍ ಪ್ರತಿಭಟನಾ ಮೆರವಣಿಗೆ | ಬೆಳ್ಳಾರೆ, ನಿಂತಿಕಲ್ಲು ಅಂಗಡಿ ಮಾಲಕರು, ಎಲ್ಲಾ ವಾಹನ ಚಾಲಕರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿ

ಬೆಳ್ಳಾರೆ: ದೇಶಭಕ್ತ ನಾಗರಿಕರು ಬೆಳ್ಳಾರೆ ವಲಯದಿಂದ ಕಾಶ್ಮೀರದ ಪಹಲ್ಗಾಮಾದಲ್ಲಿ ಉಗ್ರಗಾಮಿಗಳಿಂದ ಹತರಾದ ಹಿಂದೂ ಬಾಂಧವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ಘಟನೆಯನ್ನು ಖಂಡಿಸಿ ಬೃಹತ್‍ ಪ್ರತಿಭಟನಾ ಮೆರವಣಿಗೆ ಬೆಳ್ಳಾರೆಯಲ್ಲಿ ಶುಕ್ರವಾರ ಸಂಜೆ ನಡೆಯಿತು.

ಬೆಳ್ಳಾರೆ ಕೆಳಗಿನ ಪೇಟೆಯ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಬಸ್‍ ನಿಲ್ದಾಣದ ವರೆಗೆ ನಾಗರಿಕರು ದೀಪ ಹಿಡಿದುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.  

ಸಾಮಾಜಿಕ ಕಾರ್ಯಕತ‍್ ಮೋಹನ್‍ ದಾಸ್‍ ಬಲ್ಕಾಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.







https://screenapp.io/app/#/shared/8P4BcrrHNx























 
 

ಬೆಳ್ಳಾರೆ ಮತ್ತು ನಿಂತಿಕಲ್ಲಿನ ಎಲ್ಲಾ ಅಂಗಡಿ ಮಾಲಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‍ ಮಾಡಿ, ರಿಕ್ಷಾ ಚಾಲಕರು ಸಹಿತ ಇನ್ನಿತರ ವಾಹನದವರು ತಮ್ಮ ವಾಹನಗಳನ್ನು ನಿಲ್ಲಿಸಿ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top