ಬಿಸು ಆಚರಣೆ- ಭಜನೆ, ಆಟೋಟ ಸ್ಪರ್ಧೆಗಳೊಂದಿಗೆ ರಂಗೇರಿದ ಸವಣೂರಿನ ತುಳಸೀಪುರಂ

ಪುತ್ತೂರು: ಸವಣೂರು ಗ್ರಾಮದ ಪರಣೆ- ತುಳಸಿಪುರಂನಲ್ಲಿ ಶ್ರೀ ದೇವಿ ಸೇವಾ ಸಮಿತಿಯ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಏ. 14 ರಂದು ಬಿಸು ಆಚರಣೆ ನಡೆಯಿತು.

ಬೆಳಿಗ್ಗೆ ಬಿಸು ಕಣಿ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಹಿರಿಯರ ಆಶೀರ್ವಾದವನ್ನು ಪಡೆದ ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನ ಬಿಸು ಪರ್ಬದ ವಿಶೇಷ ಸಹಭೋಜನ ನಡೆಯಿತು.

ತುಳಸಿಪುರಂ ಶ್ರೀ ದೇವಿ ಸೇವಾ ಸಮಿತಿಯ ಸಂಚಾಲಕ ಪದ್ಮಯ್ಯ ಗೌಡ ಪರಣೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ರಾಘವ ಗೌಡರವರು ಬಿಸು ಆಚರಣೆಯ ಕುರಿತು ಉಪನ್ಯಾಸ ನೀಡಿದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾ.ಪಂ.ನ ಮಾಜಿ ಸದಸ್ಯ ಸತೀಶ್ ಬಲ್ಯಾಯ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ದಿವಾಕರ್ ಬಸ್ತಿ, ಕಾರ್ಯದರ್ಶಿ ಕೀರ್ತನ್ ಕೋಡಿಬೈಲು, ಸವಣೂರು ಕ್ಲಸ್ಟರ್ ಸಿ.ಆರ್.ಪಿ ಹಾಗೂ ಸಾಕ್ಷಾತ್ ಶಿವ ಭಜನಾ ಮಂಡಳಿಯ ಜಯoತ್ ವೈ, ಸವಣೂರು ಬೊಳ್ಳಿ-ಬೊಲ್ಪು ತುಳುಕೂಟದ ಪ್ರಧಾನ ಕಾರ್ಯದರ್ಶಿ ಉಮಾಪ್ರಸಾದ್ ರೈ ನಡುಬೈಲು, ಮನ್ಮಥ ತುಳಸಿಪುರಂ, ಯಶ್ವಿನಿ ಮನ್ಮಥ ತುಳಸಿಪುರಂ , ಬಾಲಕೃಷ್ಣ ಬಿ. ಕೆ. ಕೊಡತ್ತೋಡಿ, ಮಹಾಬಲ ಗೌಡ, ತೇಜಸ್ ಚಾಪಲ್ಲ, ಪ್ರಥಮ್ ಕಾಯರ್ಗ, ಸುಂದರ್‌ ಶೆಟ್ಟಿ ಬರಮೇಲು, ಜಯರಾಮ ಗೌಡ, ವಸಂತಿ ಮೆದು, ಚೆನ್ನಪ್ಪ ಗೌಡ ಪರಣೆ ಸಹಿತ ನೂರಾರು ಮಂದಿ ಭಾಗವಹಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top