ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಮತ್ತು ಸನ್ಮಾನ

ಶ್ರೀ ಉಮಾ ಮಹೇಶ್ವರ ಯಕ್ಷಕಲಾ ಇಷುದಿ ನಿಡ್ಲೆ ಸಂಯೋಜನೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಹಯೋಗದೊಂದಿಗೆ ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಜರಗಿತು.

ಭಾಗವತರಾಗಿ ಮಹೇಶ ಕನ್ಯಾಡಿ, ಶಾಲಿನಿ ಹೆಬ್ಬಾರ್ ಹಿಮ್ಮೇಳದಲ್ಲಿ ಮುರಾರಿ ಕಡoಬಳಿತ್ತಾಯ, ಶ್ರೀಪತಿಭಟ್ ಉಪ್ಪಿನಂಗಡಿ, ಅರ್ಥದಾರಿಗಳಾಗಿ ನಿಡ್ಲೆ ಈಶ್ವರ ಪ್ರಸಾದ್ ಪಿ.ವಿ. (ಕೌರವ), ರವಿ ಭಟ್ ನೆಲ್ಯಾಡಿ (ಭೀಮ-1),  ದಿವಾಕರ ಆಚಾರ್ಯ ಗೇರುಕಟ್ಟೆ (ಸಂಜಯ), ಹರೀಶ ಆಚಾರ್ಯ ಬಾರ್ಯ (ಅಶ್ವತ್ಥಾಮ), ಸುಬ್ರಹ್ಮಣ್ಯ ಭಟ್ಪೆರ್ವೋಡಿ (ಬೇಹಿನಚರ), ಶ್ರುತಿವಿಸ್ಮಿತ್ (ಧರ್ಮರಾಯ), ಅಂಬಾ ಪ್ರಸಾದ ಪಾತಾಳ (ಶ್ರೀ ಕೃಷ್ಣ), ಶ್ರೀಧರ ಎಸ್. ಪಿ. ಸುರತ್ಕಲ್ (ಬಲರಾಮ), ಜಯರಾಮ ನಾಲ್ಗುತ್ತು (ಭೀಮ -2) ಭಾಗವಹಿಸಿದ್ದರು.

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಯಕ್ಷಕಲಾ ಇಷುದಿಯ ಸ್ಥಾಪಕರಾದ ಕಲಾವಿದ ಈಶ್ವರ ಪ್ರಸಾದ ಪಿ.ವಿ ಅವರನ್ನು ಸನ್ಮಾನಿಸಲಾಯಿತು. ಹರೀಶ್ ಆಚಾರ್ಯ ಬಾರ್ಯ ಸನ್ಮಾನ ಪತ್ರ ವಾಚಿಸಿದರು.































 
 

ಉಮೇಶ್ ಶೆಣೈ ರಾಮನಗರ, ಬಿ.ಸುಬ್ರಹ್ಮಣ್ಯ ರಾವ್, ರವೀಂದ್ರ ದರ್ಬೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಜಯರಾಮ ಬಲ್ಯ, ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕರಾದ ಶ್ರೀಧರ ಎಸ್. ಪಿ.  ಈಶ್ವರ ಪ್ರಸಾದರನ್ನು ಗೌರವಿಸುವಲ್ಲಿ ಸಹಕರಿಸಿದರು. ಯಕ್ಷಕಲಾ ಇಷುದಿ ಉದ್ದೇಶ ಮತ್ತು  ಕಾರ್ಯಕ್ರಮಗಳ ಬಗ್ಗೆ ಈಶ್ವರ ಪ್ರಸಾದ್ ಮಾಹಿತಿ ನೀಡಿದರು.

ಉಪ್ಪಿನಂಗಡಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಹರೀಶ ಆಚಾರ್ಯ ಪುಳಿತ್ತಡಿ, ಪುಷ್ಪಾ ತಿಲಕ್, ಪ್ರದೀಪ ಆಚಾರ್ಯ ಪುಳಿತ್ತಡಿ, ಗಂಗಾಧರ ಟೈಲರ್ ಉಪಸ್ಥಿತರಿದ್ದರು. ಶ್ರುತಿ ವಿಸ್ಮಿತ್ ಸ್ವಾಗತಿಸಿ ಶ್ರೀಪತಿ ಭಟ್ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top