ಸವಣೂರು : ಸುಳ್ಯ ಮಂಡಲ, ಕುಟ್ರುಪ್ಪಾಡಿ ಮಹಾಶಕ್ತಿ ಶಕ್ತಿ ಕೇಂದ್ರದ, ಸವಣೂರು ಗ್ರಾಮ ಬೂತ್ ಸಂಖ್ಯೆ 65 ರಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಬೂತ್ ಅಧ್ಯಕ್ಷರಾದ ತೀರ್ಥರಾಮ ಕೆಡೆಂಜಿಯವರ ಮನೆಯಲ್ಲಿ ಆಚರಿಸಲಾಗಿದೆ.
ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಸವಣೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಚೇತನ್ ಕುಮಾರ್ ಕೋಡಿಬೈಲು, ಗ್ರಾಮಪಂಚಾಯಿತಿ ಸದಸ್ಯರಾದ ರಾಜೀವಿ ವಿ ಶೆಟ್ಟಿ, ಇಂದಿರಾ ಬೇರಿಕೆ, ಬೂತ್ ಕಾರ್ಯದರ್ಶಿ ಸತೀಶ್ ಬಲ್ಯಾಯ, ಸಿ. ಎ. ಬ್ಯಾಂಕ್ ಮಾಜಿ ನಿರ್ದೇಶಕಿ ವೇದಾವತಿ ಕೆಡೆಂಜಿ, ಚಿನ್ನಪ್ಪ ಕೆಡೆಂಜಿ, ವೇದಾವತಿ ಎಸ್, ಸುಶಾಂತ್, ಹರ್ಷ, ವಿಜಯ, ಅಹನಾ, ಮಾನ್ವಿ ಲಲಿತ, ಸಾನ್ವಿತ್, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.