ಮುಂಡಾಜೆ : ಗ್ರಾಮದ ಕೊಟ್ಟೂಟ್ಟುವಿನ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಇಂದು ಬೆಳಗ್ಗೆ ನಡೆಯಿತು.
ಘಟನೆಯಿಂದ ಸುಮಾರು ಒಂದೂವರೆ ಎಕರೆಯಷ್ಟು ಸ್ಥಳ ಸುಟ್ಟೋಗಿದೆ. ಸ್ಥಳೀಯ ಪರಿಸರದಲ್ಲಿ ಮನೆಗಳಿದ್ದು, ಜನರಲ್ಲಿ ಆತಂಕಕ್ಕೆ ಗುರಿಯಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಬಂಗೇರ , ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿ ಮನೆಗಳತ್ತ ಹರಡದಂತೆ ಮುನ್ನೆಚ್ಚರಿಕೆ ವಹಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಅಗ್ನಿಶಾಮಕ ವಾಹನದ ವ್ಯವಸ್ಥೆ ಇಲ್ಲದೆ ಬೆಂಕಿಯನ್ನು ನಂದಿಸಲು ನೀರಿನ ಟ್ಯಾಂಕರ್ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ.
ಬಳಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಮುಗೋಡಿ ಕನ್ಸ್ಸ್ಟ್ರಕ್ಷನ್ಸ್ ನವರ ನೀರಿನ ಟ್ಯಾಂಕರ್ ಬಂದಿದ್ದು, ಬೆಂಕಿಯನ್ನು ನಂದಿಸಿದೆ. ಮಧ್ಯಾಹ್ನದ ಬಳಿಕ ಸುರಿದ ಮಳೆಯಿಂದ ಬೆಂಕಿ ಸಂಪೂರ್ಣ ಬತ್ತಿಹೋಗಿದೆ. ಈ ಸಮಯದಲ್ಲಿ ಮಳೆ ಬಂದಿರುವುದು ಸ್ಥಳೀಯರಿಗೆ ಸಮದಾನದ ನಿಟ್ಟುಸಿರು ಬಿಡುವಂತಾಗಿದೆ.