ಪಿಎಂಶ್ರೀ ವೀರಮಂಗಲ ಶಾಲಾ ವಿದ್ಯಾರ್ಥಿಗಳು ನಿತ್ಯ ಚಪಾತಿ ಆಹಾರ ಸಂಸ್ಕರಣಾ ಕೇಂದ್ರ ಮುಕ್ವೆ ಗೆ ಅನುಭವಾತ್ಮಕ ಭೇಟಿ

ವೀರಮಂಗಲ : ಪುತ್ತೂರು ತಾಲೂಕಿನ ನರಿಮೊಗರು,ಮುಕ್ವೆ ಪರಿಸರದಲ್ಲಿರುವ ನಿತ್ಯ ಚಪಾತಿ ಆಹಾರ ಸಂಸ್ಕರಣಾ ಕೇಂದ್ರಕ್ಕೆ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿನ ಮಕ್ಕಳು ಅನುಭವಾತ್ಮಕ ಭೇಟಿ ನೀಡಿ ಆಹಾರ ಸಿರಿದಾನ್ಯಗಳಾದ ಶಾಮೆ, ಸಜ್ಜೆ ,ಬರಗು, ರಾಗಿ, ಕೊರಳೆ, ಜೋಳ, ಊದಲು, ನವನೆ, ಹಾರಕ, ಇತ್ಯಾದಿ ಆಹಾರ ವಸ್ತುಗಳಿಂದ ಸಿದ್ಧವಾಗುವ ಚಪಾತಿ, ಪೂರಿ, ಪಾನೀಯ , ಕುಕ್ಕೀಸ್, ಮಾಡುವುದನ್ನು ನೋಡಿ ತಿಳಿದರು.

ಸಂಸ್ಥೆಯ ಮುಖ್ಯಸ್ಥರಾದ ರಾಧಾಕೃಷ್ಣ ಹಾಗೂ ಉಮಾವತಿ ಸಮಗ್ರ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ 40 ವಿದ್ಯಾರ್ಥಿಗಳು ಭಾಗವಹಿಸದರು.  

ಮುಖ್ಯ ಶಿಕ್ಷಕ ತಾರಾನಾಥ ಸವಣೂರು, ಶಿಕ್ಷಕರಾದ ಕವಿತಾ, ಶಿಲ್ಪರಾಣಿ, ಸೌಮ್ಯ ಉಪಸ್ಥಿತರಿದ್ದರು. ರುಚಿಕರವಾದ ಪೇಯ, ಹಲಸಿನ ಹಣ್ಣಿನ ಬೀಜದಿಂದ ಆಗುವ  ಕುಕ್ಕೀಸ್ ಗಳನ್ನು ಸ್ವಾದಿಸಿದರು.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top