ಪುತ್ತೂರು: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಪುತ್ತೂರು ಶಾಖೆಯ ಸಕ್ರೀಯ ಸದಸ್ಯರಾದ ಸದಾನಂದ ಕೆ. ಪುತ್ತೂರು ಅವರ ಹೃದಯ ಚಿಕಿತ್ಸೆಗೆ ಧನಸಹಾಯ ನೀಡಲಾಯಿತು.
50,000 ರೂ. ವನ್ನು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಅವರು ಗುರುವಾರ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಕ್ಯಾಂಪ್ಕೋ ಪುತ್ತೂರು ಪ್ರಾಂತೀಯ ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಶೆಟ್ಟಿ.ಎ., ಶಾಖಾ ಪ್ರಬಂಧಕ ಅಮರೇಶ್ ಪಿ, ಸಿಬ್ಬಂದಿಗಳು ಹಾಗೂ ಸದಸ್ಯರಾದ ಜಯಗೋವಿಂದ ಶರ್ಮ, ನರೇಂದ್ರ ಪಡಿವಾಳ್ ಉಪಸ್ಥಿತರಿದ್ದರು.