ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ದಿಂದ ಸಮುದಾಯ ಅಭಿವೃದ್ಧಿ ವಿಭಾಗ ದಿಂದ ಸಹಾಯಧನ ವಿತರಣೆ ಕಾರ್ಯಕ್ರಮ ಮಾ.26ರಂದು ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ,(ರಿ) ಧರ್ಮಸ್ಥಳ ದ ಸಮುದಾಯಭಿವೃಧಿ ವಿಭಾಗದಿಂದ ಹಿಂದೂ ರುದ್ರ ಭೂಮಿ ಯ ಕಟ್ಟಡ ರಚನೆ ಹಾಗೂ ಸಿಲಿಕಾನ್ ಚೆಂಬರ್ ಬಗ್ಗೆ ಸಮಿತಿಯು ಕ್ಷೇತ್ರಕ್ಕೆ ಬೇಡಿಕೆ ನೀಡಿದ್ದು, 250000 ಲಕ್ಷದ ಮಂಜೂರಾತಿ ಪತ್ರ ವನ್ನೂ ನೀಡಲಾಯಿತು.
ಬೋಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಲಿನಿ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಹಸ್ತಾಂತರಿಸಿ, ರುದ್ರ ಭೂಮಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯೋಜನೆ ಕೃಷಿ ಅಧಿಕಾರಿ ಚಿದಾನಂದ, ಒಕ್ಕೂಟ ದ ಅಧ್ಯಕ್ಷರಾದ ಸೀತಾ ಸಮಿತಿಯ ಅಧ್ಯಕ್ಷರಾದ ಚಂದ್ರ ಹಾಸ ರೈ, ಕಾರ್ಯದರ್ಶಿ ಗಣೇಶ್ ನಾಯ್ಕ, ಉಪಾಧ್ಯಕ್ಷರಾದ ನೋಣಯ್ಯ , ಕೋಶಾಧಿಕಾರಿ ಚೆನ್ನಪ್ಪ ಪೂಜಾರಿ, ಸೇವಪ್ರತಿನಿಧಿ ಲೀಲಾವತಿ ರವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡ್, ಸಭಾಂಗಣ ರಚನೆಗೆ 75000 ಹಾಗೂ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು ಸಭಾಂಗಣ ರಚನೆಗೆ 100000 ಸಹಾಯ ಧನ ವಿತರಣೆ ಮಾಡಲಾಯಿತು.