ಪುತ್ತೂರು: ಕೆಮ್ಮಾಯಿ ದಾರಂದಕುಕ್ಕು ನಿವಾಸಿ ಸುಧಾಕರ ಪ್ರಭು (42.ವ.) ಇಂದು ಬೆಳಿಗ್ಗೆ 11 ಗಂಟೆ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮನೆಯಲ್ಲಿ ಮುಂದಿನ ವಾರ ನೇಮೋತ್ಸವ ನಡೆಯಲಿದ್ದು, ಅದರ ಪೂರ್ವ ತಯಾರಿಯಲ್ಲಿ ದ್ದರು. ಆದರೆ ಇವತ್ತು ಮನೆಯಲ್ಲಿ ಯಾರು ಇಲ್ಲಾದಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪುತ್ತೂರು ಆಸುಪಾಸಿನಲ್ಲಿ ಪ್ರಭು ಚರುಂಬುರಿ ಮೂಲಕ ಪುತ್ತೂರಿನ ಜನರ ಮನ ಗೆದ್ದಿದ್ದಾರೆ. ಇದೀಗ ಇವರ ಈ ದುಡುಕಿನ ನಿರ್ಧಾರ ಕುಟುಂಬದಲ್ಲಿ ಹಾಗೂ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.
ಆತ್ಮಹತ್ಯೆಗೆ ಕಾರಣ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ