ಯತ್ನಾಳ್ ಹೇಳಿಕೆಯಿಂದ ಇಡೀ ದೇಶದ ಗಮನ ಇಂದಿನ ಕಲಾಪದತ್ತ
ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಟ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಸಚಿವರ ಹೆಸರನ್ನು ಸೋಮವಾರ ಸದನದಲ್ಲೇ ಹೇಳುವುದಾಗಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ಭಾರಿ ಕುತೂಹಲ ಹುಟ್ಟಿಸಿದೆ.
ವಿಜಯಪುರದಲ್ಲಿ ಭಾನುವಾರ ಈ ವಿಚಾರವಾಗಿ ಮಾತನಾಡಿರುವ ಅವರು, ರನ್ಯಾ ರಾವ್ಗೆ ಪ್ರೊಟೊಕಾಲ್ ನೀಡಿದವರ ಮಾಹಿತಿ ಸಂಗ್ರಹಿಸಲಾಗಿದೆ. ಚಿನ್ನ ಎಲ್ಲಿಂದ ತಂದರು, ಎಲ್ಲಿಟ್ಟು ತಂದರು ಎಂಬುದು ಗೊತ್ತಿದೆ. ಸೋಮವಾರ ವಿಧಾನಸಭೆಯಲ್ಲಿ ಸಚಿವರ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ. ಹೀಗಾಇ ಇಂದಿನ ಕಲಾಪದ ಮೇಲೆ ಇಡೀ ದೇಶದ ದೃಷ್ಟಿ ನೆಟ್ಟಿದೆ.
ಚಿನ್ನ ಕಳ್ಳ ಸಾಗಾಟದ ಹಿಂದೆ ದೊಡ್ಡ ಜಾಲವಿದೆ, ಇದರಲ್ಲಿ ರಾಜಕಾರಣಿಗಳು, ಮಂತ್ರಿಗಳು, ಪೊಲೀಸ್ ಅಧಿಕಾರಿಗಳು ಇರಬಹುದು. ಆ ಹೆಣ್ಣುಮಗಳಿಗೆ ಪೊಲೀಸ್ ಸೆಕ್ಯೂರಿಟಿ ಕೊಡುತ್ತಿದ್ದವರು ಪ್ರೊಟೊಕಾಲ್ ನಿರ್ವಹಣೆ ಮಾಡುತ್ತಿದ್ದರು. ಇದರಲ್ಲಿ ನಮ್ಮ ರಾಜ್ಯದ ಗೃಹ ಮಂತ್ರಿಗಳು, ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲ್ಲ ಎಂದಿರುವ ಯತ್ನಾಳ್, ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದರಲ್ಲಿರುವ ರಾಜಕಾರಣಗಳಾಗಲಿ, ಅಧಿಕಾರಗಳಾಗಲಿ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಬಂಗಾರ ಕಳ್ಳ ಸಾಗಾಟ ಮಾಡುವವರು ಎಲ್ಲಿ ಬಂಗಾರ ಇಟ್ಟುಕೊಂಡು ತಂದಿದ್ದಾರೆ. ಮನುಷ್ಯನಿಗೆ ಎಲ್ಲೆಲ್ಲಿ ತೂತುಗಳು ಇದ್ದಾವೋ, ಅಲ್ಲೆಲ್ಲ ಬಂಗಾರ ಇಟ್ಟುಕೊಂಡು ಬಂದಿದ್ದಾರೆ. ಆ ತೂತುಗಳು ಬಂದ ಆಗಬೇಕು ಎಂದರೆ ಇದನ್ನು ಸಿಬಿಐ ತನಿಖೆಗೆ ಕೊಡಬೇಕು. ರನ್ಯಾ ರಾವ್ ತನ್ನ ತಂದೆಯ ಹುದ್ದೆ, ಪ್ರಭಾವ ಬಳಸಿಕೊಂಡಿದ್ದಾಳೆ. ರಾಜ್ಯ ಸರ್ಕಾರದ ಸಚಿವರು, ಉನ್ನತ ಪೋಲಿಸ್ ಅಧಿಕಾರಿಗಳು ಇದರಲ್ಲಿ ಇರಬಹುದು ಎಂದು ಹೇಳಿದ್ದಾರೆ.
ರನ್ಯಾ ರಾವ್ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ಸ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ ಅಧಿಕಾರಿಗಳು ಸೇರಿದಂತೆ ಯಾರೇ ತಪ್ಪು ಮಾಡಿದ್ದರು ಕ್ರಮವಾಗಲಿ ಎಂದು ಒತ್ತಾಯಿಸಿದರು.