ಕುದ್ಮಾರು (ಮಾ. 9) :  ಗ್ರಾಮ  ದೈವ  ಶ್ರೀ  ಶಿರಾಡಿ  ರಾಜನ್ ದೈವ  ಹಾಗೂ  ಸಪರಿವಾರ  ದೈವಗಳ ನೇಮೋತ್ಸವ 

ಕುದ್ಮಾರು : ಗ್ರಾಮ ದೈವ  ಶ್ರೀ  ಶಿರಾಡಿ  ರಾಜನ್ ದೈವ ಹಾಗೂ ಸಪರಿವಾರ  ದೈವಗಳ  ನೇಮೋತ್ಸವವು  ಮಾ.  9 ಭಾನುವಾರದಂದು  ಕುದ್ಮಾರು  ಗ್ರಾಮದ  ಅನ್ಯಾಡಿಯಲ್ಲಿ  ಕಟ್ಟತ್ತಾರು ಕಟ್ಟೆ ಯಲ್ಲಿ ನಡೆಯಲಿದೆ.

ನೇಮೋತ್ಸವದಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 7 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್‍ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು. ರಾತ್ರಿ 8:30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು. ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್‍ ದೈವದ ಹಾಗೂ ಸಪರಿವಾರ ದೈವಗಳ ನೇಮೋತ್ಸವ, ಎಲ್ಲಾ ಗ್ರಾಮಸ್ಥರಿಗೆ ಸಿರಿಮುಡಿ ಗಂಧಪ್ರಸಾದ ವಿತರಣೆ, ರಾತ್ರಿ 1:30 ಕ್ಕೆ ಚಾಪಲ್ಲ ಗಡಿಗೆ ಮಾರಿ ಹೋಗುವುದು ನಡೆಯಲಿದೆ.

ನೇಮೋತ್ಸವಕ್ಕೆ  ಭಕ್ತಾದಿಗಳು  ಸಿರಿಮುಡಿ  ಗಂಧ  ಪ್ರಸಾದವನ್ನು  ಸ್ವೀಕರಿಸಿ,  ಶ್ರೀ  ದೈವಗಳ  ಕೃಪೆಗೆ ಪಾತ್ರರಾಗಬೇಕೆಂದು   ಅಧ್ಯಕ್ಷ  ಸತೀಶ್  ಕುಮಾರ್  ಕೆಡೆಂಜಿ,  ಕಾರ್ಯದರ್ಶಿ ನಾಗೇಶ್ ಕೆಡೆಂಜಿ ಹಾಗೂ ಆಡಳಿತ ಮಂಡಳಿ ಸದಸ್ಯರು ಪತ್ರಿಕಾ  ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top