ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೋತ್ಸವ ಸಂಪನ್ನ | ಫೆ.22-23 ರಂದು ದೊಂಪದ ಬಲಿ ನೇಮೋತ್ಸವ

ಪುತ್ತೂರು: ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವದಿ ಜಾತ್ರೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಬೆಳಿಗ್ಗೆ 6ರಿಂದ ಗಣಪತಿ ಹೋಮ, ಸಿಯಾಳಭಿಷೇಕ, ಪವಮಾನಾಭಿಷೇಕ, ನವಕ ಕಲಶಾಭಿಷೇಕ, 11 ರಿಂದ ಬೆಳಂದೂರು ಶ್ರೀ ಲಕ್ಷ್ಮಿ ಪ್ರಿಯ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಮದ್ಯಾಹ್ನ 12:30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು.

ಸಂಜೆ 5 ಗಂಟೆಗೆ ದೈವಗಳ ಭಂಡಾರ ತೆಗೆಯಲಾಯಿತು. 6ರಿಂದ ವೀರಮಂಗಲ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ದಾಸ ಸಂಕೀರ್ತನೆ ನಡೆಯಿತು. ರಾತ್ರಿ 7 ರಿಂದ ಕಾಳಿಕ ನಾಟ್ಯಾಲಯ ವೀರಮಂಗಲ, ಸವಣೂರು ಇವರಿಂದ ವಿದುಷಿ ಸುಪ್ರಿಯಾ ಕಾರ್ತಿಕ್ ಶಗ್ರಿತ್ತಾಯ ವೀರಮಂಗಲರವರ ನಿರ್ದೇಶನದ ಭರತನಾಟ ನಡೆಯಿತು.



















































 
 

ರಾತ್ರಿ 9 ಗಂಟೆಗೆ ಶ್ರೀ ದೇವರ ಉತ್ಸವ,, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ಪ್ರಸಾದ ವಿತರಣೆಯಾಯಿತು. ಬಳಿಕ  ರಾತ್ರಿ 9:30ರಿಂದ ಅನ್ನಸಂತರ್ಪಣೆ ಜರಗಿತು. ಜರುಗಲಿದೆ. ರಾತ್ರಿ 12 ಗಂಟೆಗೆ ಉಳ್ಳಾಕುಳು, ಕೊಡಮಣಿತ್ತಾಯ, ಹುಲಿಭೂತ, ಅಂಜಣ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

ಭಾನುವಾರ ಬೆಳಿಗ್ಗೆ 7 ರಿಂದ ಶ್ರೀ ರಕ್ಷೇಶ್ವರಿ, ಶಿರಾಡಿ ರಾಜನ್ ದೈವ, ಗುಳಿಗೆ ದೈವಗಳ ನೇಮೋತ್ಸವ ಜರಗಿತು.  ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ಜರಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಉಮೇಶ್‍ ಕೋಡಿಬೈಲು, ಸದಸ್ಯರು, ಉತ್ಸವ ಸಮಿತಿ ಅಧ್ಯಕ್ಷ ಶಿವರಾಮ ಭಟ್‍, ಭಕ್ತಾದಿಗಳು ಉಪಸ್ಥಿತರಿದ್ದರು.

ಫೆ. 22-23 ರಂದು ದೊಂಪದ ಬಲಿ ನೇಮೋತ್ಸವ:

ಫೆ.22 ಶನಿವಾರ ಭಂಡಾರ ತೆಗೆದು ಫೆ.23 ಭಾನುವಾರ ಬೆಳಗಿನಿಂದ ವೀರಮಂಗಲ ಶ್ರೀ ಶಿರಾಡಿ ರಾಜನ್ ದೈವದ ದೊಂಪದ ಬಲಿ ನೇಮೋತ್ಸವ ಜರುಗಲಿದೆ ಎಂದು ವಿಶ್ವಸ್ಥ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top