ಪುತ್ತೂರು: ನಗರದ ಬೊಳ್ಳಾರ್ ನಲ್ಲಿ ಇತ್ತಂಡಗಳ ಮಧ್ಯೆ ವಾದಗಳು ನಡೆದಿದ್ದು,ಕೋಪಕ್ಕೆ ತುತ್ತಾಗಿ ವ್ಯಕ್ತಿಯೊರ್ವರಿಗೆ ಸೋಡಾ ಬಾಟಲಿಯಿಂದ ಚುಚ್ಚಿದ್ದ ಘಟನೆ ಬುಧವಾರ ತಡ ರಾತ್ರಿ ನಡೆದಿದೆ.
ಘಟನೆಯ ಕುರಿತು ಉಮೇಶ್ ಬಾಳುಗೋಡು ದೂರು ನೀಡಿದ್ದು, ಪುತ್ತೂರು ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ತಿಂಗಳಾಡಿ ನೀವಾಸಿ ನರ್ಮೇಶ್ ರೈ, ಪ್ರಸಾದ್ ಪ್ರಕರಣದ ಆರೋಪಿತರು. ನರ್ಮೇಶ್ ರೈ ಎಂಬುವರು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಇತ್ತಂಡದವರು ಕುಡಿತದ ಮತ್ತಿನಲ್ಲಿ ಜಗಳವಾಡಿದ್ದು, ಈ ವೇಳೆ ಇದು ತಾರಕಕ್ಕೆ ಹೋಗಿ ಉಮೇಶ್ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.