ಪುತ್ತೂರು : ನರಿಮೊಗರು ಶಾಲಾ ಬಳಿ ಆಟೋರಿಕ್ಷಾ ಮತ್ತು ಹೋಂಡಾ ಆಕ್ಟಿವ ನಡುವೆ ಅಪಘಾತ ಸಂಭವಿಸಿದ್ದು ಸವಾರರಿಗೆ ಗಾಯವಾಗಿದೆ.
ಅಪಘಾತ ನಡೆದ ತಕ್ಷಣ ಅಲ್ಲಿಗೆ ಆಗಮಿಸಿದ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಕೂಡಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು

ಮಾರ್ಗದ ಕೆಲಸ ಮಾಡುವ ಗುತ್ತಿಗೆ ದಾರರ ಕೆಲವು ತಪ್ಪುಗಳಿಂದ ಅಪಘಾತ ಹೆಚ್ಚುತ್ತಿದೆ. ಕಾರಣ ನರಿಮೊಗರು ಶಾಲಾ ಬಳಿ ಇರುವ 80 ವರ್ಷ ಹಳೆಯ ಕಟ್ಟಡ ಮಾರ್ಗಕ್ಕೆ ಹೊಂದಿಕೊಂಡು ಇರುವುದರಿಂದ ಮಾರ್ಗದ ಅಗಲ ಕಡಿಮೆ ಆಗಿ ಮುಂದೆ ಬರುವ ವಾಹನ ಕಾಣದೆ ಇರುವುದು ಅಪಘಾತಕ್ಕೆ ಕಾರಣವಾಗಿದೆ. ಇನ್ನು ಹೆಚ್ಚಿನ ಸ್ಪೀಡ್ ಬ್ರೇಕರ್ ಲೈನ್ ನ್ನು ಮತ್ತೆ ಹತ್ತಿರ ಹಾಕಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯ ಆಗಿರುತ್ತದೆ ತಕ್ಷಣವೇ ವಾಹನ ಸವಾರಿಗೆ ತೊಂದರೆ ಆಗುವ ಪಾಲು ಬಿದ್ದ ಕಟ್ಟಡವನ್ನು ತೆರವು ಗೊಳಿಸಲು ಪ್ರವೀಣ್ ಆಚಾರ್ಯ ಗುತ್ತಿಗೆದಾರರನ್ನು ಅಗ್ರಹಿದ್ದಾರೆ.