ಪಾದಚಾರಿಗಳಿಗೆ ಕಾರು ಡಿಕ್ಕಿ | ಇಬ್ಬರ  ದುರ್ಮರಣ | ಕಾರನ್ನು ವಶಕ್ಕೆ ಪಡೆದ ಸುಳ್ಯ ಪೋಲಿಸರು

ಸುಳ್ಯ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಾರು ಹರಿದುಕೊಂಡು ಹೋಗಿರುವ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಕನಕಮಜಲುವಿನಲ್ಲಿ ನಡೆದಿದೆ.  ಕಾರು ಅಪಘಾತದಲ್ಲಿ ಪಾದಚಾರಿಗಳಿಬ್ಬರು  ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣವಾದ ಕಾರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು ಬೆಟ್ಟಂಪಾಡಿಯ ರಾಮಯ್ಯ ರೈ ಮತ್ತು ಕನಕಮಜಲಿನ ಜನಾರ್ದನ ರೈ ಅವರು ಫೆ. 8ರಂದು ರಾತ್ರಿ ನಡೆದ ಕಾರು ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಫೆ. 9ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಅಪಘಾತ ಎಸಗಿದ ಕಾರು ಚಾಲಕ ಘಟನ ಸ್ಥಳದಲ್ಲಿ ನಿಲ್ಲದೆ ಸುಳ್ಯದ ಕಡೆಗೆ ಚಲಿಸಿದ್ದಾನೆ. ಅಪಘಾತ ವೆಸಗಿದ ಕಾರನ್ನು ಪತ್ತೆ ಹಚ್ಚಲು ತೆರಳಿದ ಸುಳ್ಯ ಪೊಲೀಸರಿಗೆ ಅಪಘಾತ ಎಸಗಿದ್ದು ಇಕೋ ಕಾರು ಎಂಬುವುದು  ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರು ಸುಳ್ಯದ ಬೀರಮಂಗಲ ನಿವಾಸಿಯದ್ದು ಎಂದು ತಿಳಿದುಬಂದಿದೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top