ಪುತ್ತೂರು : ರಜತ ಸಂಭ್ರಮದಲ್ಲಿರುವ ಎವಿಜಿ ಎಸೋಸಿಯೇಟ್ಸ್ ವತಿಯಿಂದ “ಎವಿಜಿ ಚಿತ್ರೋತ್ಸವ’ ಜ.19 ಭಾನುವಾರ ಬನ್ನೂರಿನಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ನಡೆಯುವ ಕಾರ್ಯಕ್ರಮವನ್ನು ಯೋಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಿನ್ನಿತ್ ನೀರ್ಪಾಜೆ ಉದ್ಘಾಟಿಸಲಿದ್ದು, ಪುತ್ತೂರು ಬಾಲಾಜಿ ಪೈಂಟ್ಸ್ ನ ಕಳುವಾಜೆ ವೆಂಟ್ರಮಣ ಗೌಡ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಐಕ್ಯಮ್ ಅಕಾಡೆಮಿ ಆಫ್ ಆರ್ಟ್ಸ್ ನ ನಿರ್ದೇಶಕ ನಿಖಿತಾ ಪಾಣಾಜೆ, ಫೈನ್ ಆರ್ಟ್ ಶಿಕ್ಷಕ ಕೆ.ದಿನೇಶ್ ವಿಶ್ವಕರ್ಮ ಪಾಲ್ಗೊಳ್ಳುವರು ಎಂದು ಎವಿಜಿ ಅಸೋಸಿಯೇಟ್ಸ್ ನ ಎ.ವಿ.ನಾರಾಯಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.