ಪಟಾಕಿ ಡಬ್ಬಾದ ಮೇಲೆ ಕುಳಿತುಕೊಳ್ಳುವ ಸವಾಲು ಸ್ವೀಕರಿಸಿ ಪ್ರಾಣ ಕಳೆದುಕೊಂಡ ಯುವಕ

ಆಟೋರಿಕ್ಷಾ ಸಿಗುವ ಎಂಬ ಆಸೆಯಿಂದ ಅಪಾಯಕಾರಿ ಆಟ ಆಡಿದ ಯುವಕ

ಬೆಂಗಳೂರು : ಪಟಾಕಿ ಜೊತೆ ಹುಡುಗಾಟವಾಡಲು ಹೋಗಿ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ. ಶಬರೀಶ್​ (32) ಮೃತ ಯುವಕ. ಯುವಕರ ಹುಚ್ಚಾಟದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಕ್ಟೋಬರ್ 31ರಂದು ಐದಾರು ಮಂದಿ ಯುವಕರು ಶಬರೀಶ್​ಗೆ ಪಟಾಕಿ ತುಂಬಿಸಿದ ಡಬ್ಬಾದ ಮೇಲೆ ಕುಳೀತುಕೊಳ್ಳಲು ಸವಾಲು ಹಾಕುತ್ತಾರೆ. ಡಬ್ಬಾದಲ್ಲಿ ಪಟಾಕಿ ತುಂಬಿಸಿ ಬೆಂಕಿಹಚ್ಚಿ ಅದರ ಮೇಲೆ ಶಬರೀಶ್​ನನ್ನು ಕೂರಿಸಿದ್ದಾರೆ.‌ ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲ ಓಡಿ ಹೋಗಿದ್ದಾರೆ. ಪಟಾಕಿ ಸ್ಫೋಟಗೊಂಡು ಶಬರೀಶ್​ನ ಹಿಂಬದಿ ಮತ್ತು ಗುಪ್ತಾಂಗಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ. ಕೂಡಲೇ ಶಬರೀಶ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೆ ಎರಡು ದಿನಗಳ ಬಳಿಕ ಶಬರೀಶ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟಾಕಿ ತುಂಬಿದ ಡಬ್ಬಾದ ಮೇಲೆ ಕುಳಿತರೆ ಆಟೋರಿಕ್ಷಾ ಕೊಡಿಸುತ್ತೇವೆ ಅಂತ ಯುವಕರು ಚಾಲೆಂಜ್ ಹಾಕಿದ್ದರು. ಆಟೋರಿಕ್ಷಾ ಆಸೆಗಾಗಿ ಶಬರೀಶ್​ ಪಟಾಕಿ ಡಬ್ಬ ಮೇಲೆ ಕುಳಿತಿದ್ದನು ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ಆರು ಯುವಕರ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹುಡುಗಾಟಕ್ಕೆ ಜೀವ ತೆಗೆದ ಆರೋಪಿಗಳಾದ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್​ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.







https://screenapp.io/app/#/shared/8P4BcrrHNx























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top