ಸವಣೂರು ಪರಿಸರದ ಬೇಡಿಕೆಯಾದ 63 ಕೆ.ವಿ. ವಿದ್ಯುತ್ ಪರಿವರ್ತಕಕ್ಕೆ ಚಾಲನೆ

ಸವಣೂರು: ಗ್ರಾಮದ ಬೇರಿಕೆ ಎಂಬಲ್ಲಿ ಅಲ್ಲಿನ ಪರಿಸರದ ಬಹುದಿನಗಳ ಬೇಡಿಕೆಯಾದ 63 K.V.(ಕೆ. ವಿ ) ವಿದ್ಯುತ್ ಪರಿವರ್ತಕವನ್ನು ಸವಣೂರು ಮೆಸ್ಕಾಂನ ಜೆ. ಇ. ರಾಜೇಶ್ ಅರವರ ಮುತುವರ್ಜಿಯಲ್ಲಿ  ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ವೆಂಕಪ್ಪ ಶೆಟ್ಟಿ ಸವಣೂರು ಗುತ್ತು, ಸವಣೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ವಸಂತ್ ಶೆಟ್ಟಿ ಸಿಬಂದಿ ಪ್ರಮೋದ್ ರೈ, ಪಂಚಾಯತ್ ಸದಸ್ಯೆ ಇಂದಿರಾ ಬೇರಿಕೆ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಮಾಜಿ ಸದಸ್ಯೆ ಗಾಯತ್ರಿ ಬರಮೇಲು ಸವಣೂರು ಸಿ. ಎ ಬ್ಯಾಂಕ್ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಮೆಸ್ಕಾಂನ ಪವರ್ ಮ್ಯಾನ್ ಗಳಾದ ರಂಜಿತ್, ಮೌನೇಶ್, ಮಹದೇವ್. ಮೀಟರ್ ರೀಡರ್  ಬಾಲಚಂದ್ರ. ಕೆ, ರಾಮಕೃಷ್ಣ ಪ್ರಭು, ವೇದಾವತಿ ಬೇರಿಕೆ ರಘು ಬೇರಿಕೆ ಉಮೇಶ್ ಗೌಡ ಬೇರಿಕೆ ಜಯಂತಿ ಬೇರಿಕೆ,ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೊಡಿಭೈಲು ಖಾದ್ರಿ ಬೇರಿಕೆ,ಕುಮಾರ್ ಬೇರಿಕೆ, ಹರೀಶ್ ಸುಣ್ಣಾಜೆ ಹಾಗೂ ಅಲ್ಲಿನ ಪರಿಸರದ  ಪಲಾನುಭವಿಗಳು ಉಪಸ್ಥಿತರಿದ್ದರು.

ಸವಣೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಬಲ್ಯಾಯ ಸ್ವಾಗತಿಸಿ, ನಿರೂಪಿಸಿದರು. ಸಿ.ಚೇತನ್  ಕುಮಾರ್ ಕೋಡಿಬೈಲು ವಂದಿಸಿದರು.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top