ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ | ಪುತ್ತೂರಿನಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಕರಪತ್ರ ಹಂಚುವ ಮೂಲಕ ಅಭಿಯಾನ

ಪುತ್ತೂರು: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಪುತ್ತೂರಿನಾದ್ಯಂತ ಅಭಿಯಾನ ಆರಂಭಿಸಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೋಮವಾರ ಕರಪತ್ರ ಹಂಚುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ದೀಪಾವಳಿಯನ್ನು ರಾಷ್ಟ್ರದ್ರೋಹಿ ಹಲಾಲ್ ಮುಕ್ತವಾಗಿ ಆಚರಿಸಿ ಎಂದು ಈ ಸಂದರ್ಭದಲ್ಲಿ ಕರೆ ನೀಡಿದದರು.

ಭಾರತದಲ್ಲಿ ಇಸ್ಲಾಂ ಮೇಲಾಧಾರಿತ ಹಲಾಲ್ ಆರ್ಥಿಕ ವ್ಯವಸ್ಥೆ ನಿರ್ಮಿಸಲು ಪ್ರಯತ್ನಗಳಾಗುತ್ತಿವೆ. ಎಫ್ ಎಸ್ ಎಸ್ ಎ ಐ’ ನಂತಹ ಸರ್ಕಾರಿ ಸಂಸ್ಥೆಯ ಪ್ರಮಾಣಪತ್ರ ತೆಗೆದುಕೊಂಡ ನಂತರವೂ ಇಸ್ಲಾಮೀ ಸಂಸ್ಥೆಗಳು ಸಾವಿರಾರು ರೂಪಾಯಿ ತೆಗೆದುಕೊಂಡು ಪ್ರಮಾಣಪತ್ರ ನೀಡುತ್ತಿವೆ. ಮಾಂಸಕಷ್ಟೇ ಸೀಮಿತವಾಗಿದ್ದ ಮೂಲ ಹಲಾಲ್ ಪರಿಕಲ್ಪನೆ ಈಗ ಸಸ್ಯಹಾರಿ ಪದಾರ್ಥ, ಎಣ್ಣೆ, ಚಾಕಲೇಟು, ಚಿಪ್ಸ್, ರೆಸ್ಟೋರೆಂಟ್ ಹೀಗೆ ಇನ್ನಿತರ ಸಾಮಾಗ್ರಿಗಳವರೆಗೆ ತಲುಪಿದೆ. ಹಾಗಾಗಿ ಹಲಾಲ್ ನಂತಹ ಉತ್ಪನ್ನಗಳನ್ನ ಹಿಂದೂಗಳಾದ ನಾವು ಉಪಯೋಗಿಸದೇ ಹಲಾಲ್ ಮುಕ್ತ ಆಚರಣೆ ಮಾಡಬೇಕಿದೆ ಎಂದು ಸಮಿತಿಯವರು ಹಿಂದೂ ಬಾಂಧವರಲ್ಲಿ ವಿನಂತಿಸಿದರು.







































 
 

ಹಲಾಲ್ ಹಕ್ಕು ಮುಸಲ್ಮಾನರಿಹಗಷ್ಟೇ ಸೀಮಿತ. ಹಾಗಿರುವಾಗ ಅದನ್ನ ಹಿಂದೂ ಹಾಗೂ ಇನ್ನಿತರ ಧರ್ಮ ದಮರ ಮೇಲೆ ಏಕೆ ಹೇರಲಾಗುತ್ತಿದೆ. ಭಾರತದಲ್ಲಿ ಹಿಂದೂಗಳು ಹಲಾಲ್ ಮುಕ್ತ ಸಾಮಾಗ್ರಿಗಳನ್ನ ಖರೀದಿಸಬೇಕು. ಭಾರತದಲ್ಲೇ ತಯಾರಾದ ಉತ್ಪನ್ನಗಳನ್ನ ಉಪಯೋಗಿಸುವ ಮೂಲಕ ಹಲಾಲ್ ಉತ್ಪನ್ನಗಳನ್ನು ಬ್ರೇಕ್ ಹಿಲಿರಬೇಕು ಎಂದು ಒತ್ತಾಯಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top