ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಡೊಂಬಯ್ಯ ನಲಿಕೆ ಆಯ್ಕೆ

ಸವಣೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆ ಅವರು ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್‍.ಬಾಜಾಲಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ದ..ಕ ದಿಂದ ಡೊಂಬಯ್ಯ ನಲಿಕೆ ಅವರನ್ನು ಸೇರಿಸಿ ರಾಜ್ಯದ 20 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಂಘಟಕ, ಕಾರ್ಯಕ್ರಮ ಅಧಿಕಾರಿ ಆಗಿದ್ದ ದಿ.ಟಿ.ಕೆ. ಗೌಡ ಅವರು ಸ್ಥಾಪಿಸಿದ ದತ್ತಿಯಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು ಪುರಸ್ಕಾರದ ಜತೆಗೆ ರಾಜ್ಯಮಟ್ಟದ ಗೌರವ ಒಳಗೊಂಡಿದೆ. ಅ.26 ಶನಿವಾರ ಬೆಂಗಳೂರಿನ ಜಾಲಹಳ್ಳಿಯ ಸೈಂಟ್‍ ಕ್ಲಾರೆಟ್ ಸ್ವಾಯತ್ತ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಡೊಂಬಯ್ಯ ನಲಿಕೆ ಅವರು ದಿ.ಐತ್ತ ಅಜಿಲ ಮತ್ತು ದಿ.ದುಗ್ಗಮ್ಮ ದಂಪತಿಯ ಏಳು ಮಕ್ಕಳಲ್ಲಿ ಕೊನೆಯ ಮಗನಾಗಿ 13-7-1976 ರಲ್ಲಿ ಜನಿಸಿದ್ದು, ಕೊಪ್ಪ ಸರಕಾರಿ ಶಾಲೆ ಮತ್ತು ಕುದ್ಮಾರು ಸರಕಾರಿ ಶಾಲೆಯಲ್ಲಿ 7ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ಬಳಿಕ ತನ್ನ ತಂದೆಯ ಒತ್ತಾಸೆಯಂತೆ 16ನೇ ವಯಸ್ಸಿನಲ್ಲಿ ದೈವಾರಾಧನೆಲ್ಲಿ ತೊಡಗಿಕೊಂಡಿದ್ದರು. ಶಿರಾಡಿ, ಕಲ್ಲುರ್ಟಿ, ಉಳ್ಳಾಕುಲು, ಚಾಮುಂಡಿ, ಪಂಜುರ್ಲಿ ದೈವಗಳೀಗೆ ನೇಮ ಕಟ್ಟುತ್ತಿದ್ದಾರೆ. ಅವರು ಈ ವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ದೈವದ ನರ್ತನ ಸೇವೆ ಮಾಡಿದ್ದಾರೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top