ಅಗ್ನಿವೀರ್ ಗೆ ಆಯ್ಕೆಯಾದ ಅವಿನ್ ಎಂ. ಅವರಿಗೆ ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಗೌರವಾರ್ಪಣೆ

ಕಾವು: ಅಗ್ನಿಪತ್ ಯೋಜನೆಯ ಅಗ್ನಿವೀರ್ ಗೆ ಆಯ್ಕೆಗೊಂಡು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ತೆರಳುತ್ತಿರುವ ಕಾವು ಮಾಣಿಯಡ್ಕ ಚಂದ್ರಶೇಖರ ಮತ್ತು ಗೀತಾ ದಂಪti ಪುತ್ರ ಅವಿನ್ ಎಂ. ಅವರನ್ನು ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಗೌರವಿಸಲಾಯಿತು.

ಸಮಿತಿಯ ಗೌರವಾದ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಪೇಟ ತೋಡಿಸಿ ಶಾಲು, ಹಾರ ಹಾಕಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದನಾ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ, ಗೌರವ ಸಲಹೆಗಾರ ಚಂದ್ರಶೇಖರ ರಾವ್ ನಿಧಿಮುಂಡ, ಕೋಶಾಧಿಕಾರಿ ಕೃಷ್ಣ ಪ್ರಸಾದ್ ಕೊಚ್ಚಿ, ಮಾಜಿ ಅಧ್ಯಕ್ಷ ಲೋಕೇಶ್ ಚಾಕೋಟೆ, ಸದಸ್ಯರಾದ ಚಂದ್ರಶೇಖರ ಪಾಟಳಿ ಪಟ್ಟುಮೂಲೆ, ಕೇಶವ ಮೂರ್ತಿ, ಧನಂಜಯ ನಾಯ್ಕ, ನಹುಷಾ ಭಟ್, ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ಚಿತ್ರ ಪ್ರಸಾದ್ ರೈ ಅಂಕೊತ್ತೀಮಾರು, ನಾರಾಯಣ ಆಚಾರ್ಯ ಮಳಿ, ಸಂಕಪ್ಪ ಪೂಜಾರಿ, ನಿರಂಜನ ಕಮಲಡ್ಕ, ವಿಶ್ವನಾಥ ಕೆರೆಮಾರು, ಸಂದೇಶ್ ಚಾಕೋಟೆ, ಪ್ರಜ್ವಲ್ ಕೆರೆಮಾರು ಉಪಸ್ಥಿತರಿದ್ದರು



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top