ಇಂದು (ಅ.6) : ಪುಣಚ ದೇವಿನಗರದಲ್ಲಿ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ | ಪುಣಚ ದೇವಿನಗರ ಶ್ರೀ ಮಹಮ್ಮಾಯೀ ಜೈ ಭಾರತಿ ಮರಾಟಿ ಸಂಘದ ನೇತೃತ್ವ

ಪುತ್ತೂರು: ಕುಸಾಲ್ದ ಗುರಿಕಾರೆ ದಿನೇಶ್‍ ಕೋಡಪದವು ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ ‘ಯಕ್ಷ ತೆಲಿಕೆ’ ಯಕ್ಷ ಹಾಸ್ಯ ವೈಭವ ಇಂದು ರಾತ್ರಿ 8 ಗಂಟೆಗೆ ಪುಣಚ ದೇವಿನಗರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಬಂಟ್ವಾಳ ತಾಲೂಕಿನ ಪುಣಚ ದೇವಿನಗರ ಶ್ರೀ ಮಹಮ್ಮಾಯೀ ಜೈ ಭಾರತಿ ಮರಾಟಿ ಸಂಘದ ವತಿಯಿಂದ ನವರಾತ್ರಿ ಪ್ರಯುಕ್ತ ಭಜನೋತ್ಸವದ ಅಂಗವಾಗಿ  ಕಾರ್ಯಕ್ರಮ ನಡೆಯಲಿದೆ.

ಯಕ್ಷ ತೆಲಿಕೆ ಕಾರ್ಯಕ್ರಮದಲ್ಲಿ ಭಾಗವತರಾಗಿ ಗಿರೀಶ್‍ ರೈ ಕಕ್ಕೆಪದವು, ಮದ್ದಳೆ ನೆಕ್ಕರೆಮೂಲೆ ಗಣೇಶ್‍ ಭಟ್‍, ಚೆಂಡೆ, ರೋಹಿತ್ ಉಚ್ಚಿಲ, ಕಲಾವಿದರಾಗಿ ರಂಗ ಸವ್ಯಸಾಚಿ ಪ್ರಜ್ವಲ್ ಕುಮಾರ್, ಯಕ್ಷಬೊಳ್ಳಿ ದಿನೇಶ್‍ ರೈ ಕಡಬ, ಹಾಸ್ಯದರಸು ಸುಂದರ್ ಬಂಗಾಡಿ, ಕುಸಾಲ್ದ ಗುರಿಕಾರೆಯಾಗಿ ದಿನೇಶ್‍ ಶೆಟ್ಟಿಗಾರ್ ಕೊಡಪದವು ಸಹಕರಿಸಲಿದ್ದಾರೆ.

































 
 

ಕಾರ್ಯಕ್ರಮದ ನೇರಪ್ರಸಾರ ಜನಮನದ ಪ್ರತಿಧ್ವನಿ ‘ನ್ಯೂಸ್ ಪುತ್ತೂರು’ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top