ವಿಶ್ವ ಹಿಂದೂ ಮುಖಂಡ ಶರಣ್ ಪಂಪ್‍ ವೆಲ್‍ ಗೆ ಸಾಮಾಜಿಕ ಜಾಲತಾಣದಲ್ಲಿ ಜಿಹಾದಿಗಳಿಂದ ಬೆದರಿಕೆ | ತಿರುಗೇಟು ನೀಡಿದ ಪುನೀತ್ ಅತ್ತಾವರ

ಮಂಗಳೂರು: ಸೋಮವಾರ ನಡೆಯುವ ಈದ್ ಮಿಲಾದ್  ಮೆರವಣಿಗೆ ಬರಲಿದ್ದು, ಈ ಮೆರವಣಿಗೆಗೆ ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್‍ ವೆಲ್‍ ಮತ್ತು ಬಜರಂಗದಳ ಕಾರ್ಯಕರ್ತರು ಬಂದು ನಿಲ್ಲಬೇಕು ಎಂದು ಬೈದು ಧಮ್ಕಿ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಜಿಹಾದಿಗಳ ನಿಮ್ಮ ಸವಾಲನ್ನು ನಾವು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ತಿರುಗೇಟು ನೀಡಿದ್ದಾರೆ.

ಸೋಮವಾರದಂದು ಈದ್‌ಮಿಲಾದ್ ಪ್ರಯುಕ್ತ ಬಿ.ಸಿ ರೋಡ್‌ನ ಕೈಕಂಬದಿಂದ ಪರ್ಲಿಯ, ತಾಳಿಪಡ್ಡು, ಕೈಕಂಬ ಪೊಳಲಿ ದ್ವಾರದ ಬಳಿ ಕೈಕಂಬ ಮಸೀದಿಗೆ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ವೇಳೆ ಶರಣ್ ಪಂಪ್‌ ವೆಲ್ ಮತ್ತು ಬಜರಂಗದಳದ ಕಾರ್ಯಕರ್ತರು ಬಂದು ನಿಲ್ಲಬೇಕು ಎಂದು ಬೈದು ಧಮ್ಮಿ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ, ನಾವು ಬರುತ್ತಿದ್ದೇವೆ, ನಿಮಗೆ ತಾಕತ್ತು ಇದ್ದರೆ ತಡೆಯಿರಿ. ನೀನು ಹೇಳಿದ ಜಾಗಕ್ಕೆ ಬರುತ್ತೇವೆ. ಹಿಂದುತ್ವ ಮೇಲಾ, ಅಥವಾ ಜಿಹಾದಿಗಳಾದ ನೀವು ಮೇಲಾ, ಎಂದು ನೋಡೆ ಬಿಡುವ ಎಂದು ತಮ್ಮಫೇಸ್‌ಬುಕ್ ಖಾತೆಯಲ್ಲಿ ಬಹಿರಂಗವಾಗಿ ತಿರುಗೇಟು ನೀಡಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top