ಸೆ.18-24 : ಮನೆ ನಾಯಿಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ | ಮಲ್ಪೆ ಮಧ್ವರಾಜ್ ಎನಿಮಲ್ ಕೇರ್, ಡಬ್ಲ್ಯೂವಿಎಸ್ ಇಂಡಿಯಾ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಸಾಥ್‍

ಪುತ್ತೂರು: ಮಲ್ಪೆ ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಹಾಗೂ ಡಬ್ಲ್ಯೂವಿಎಸ್ ಜಂಟಿ ಆಶ್ರಯದಲ್ಲಿ ಪುತ್ತೂರು ಯುವ ರೋಟರಿ ಕ್ಲಬ್‍ ಸಹಕಾರದೊಂದಿಗೆ ಮನೆ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಸೆ.18 ರಿಂದ 23 ರ ವರೆಗೆ ಮುರ ಸಮೀಪದ ಪೋಳ್ಯ ಖುಷಿ ಕಂಪೌಂಡ್ ನಲ್ಲಿ ನಡೆಯಲಿದೆ ಎಂದು ಮಧ್ವರಾಜ್ ಎನಿಮಲ್ ಕೇರ್‍ ನ ಟ್ರಸ್ಟಿ ಮಮತಾ ರಾವ್ ತಿಳಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆರು ದಿನಗಳ ಕಾಲ ನಡೆಯುವ ಈ ಸಂತಾನಹರಣ ಚಿಕಿತ್ಸೆಯಲ್ಲಿ ದೇಶೀಯ ಹಾಗೂ ಮನೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ಕೈಗೊಳ್ಳಲಾಗುವುದು. ಖ್ಯಾತ ಪಶುವೈದ್ಯಕೀಯ ವೈದ್ಯರಾದ ಡಾ.ಇಲೋನಾ ಓಟರ್ ಸಂತಾನಹರಣ ಚಿಕಿತ್ಸೆ ಮಾಡುವರು ಎಂದು ಅವರು ತಿಳಿಸಿದ ಅವರು, ಸುಮಾರು 120 ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಮ್ಮ ಗುರಿಯಾಗಿದೆ. ಈ ವರ್ಷದಲ್ಲಿ ಇದು ಮೂರನೇ ಬಾರಿಗೆ ನಡೆಸುವುದು ಎಂದು ತಿಳಿಸಿದರು.

ಬಹುತೇಕ ಮನೆಯವರು ತಮ್ಮ ಮನೆಯ ನಾಯಿಗಳು ಇಡುವ ನಾಯಿ ಮರಿಗಳನ್ನು ಬೀದಿಗೆ ಬಿಡುತ್ತಾರೆ. ಪರಿಣಾಮ ಮರಿಗಳು ಬೀದಿಯಲ್ಲೇ ಬೆಳೆದು ಸಾರ್ಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಕೊಡಲು ಆರಂಭಿಸುತ್ತದೆ. ಬಳಿಕ ಇದು ದೂರಿನ ಮೂಲಕ ಪೊಲೀಸ್ ಠಾಣೆ ಏರುವ ಸಂಭವವಿರುತ್ತದೆ. ಅದಕ್ಕೆ ಮುಂಜಾಗ್ರತವಾಗಿ ತಮ್ಮ ಮನೆಯ ನಾಯಿಗಳಿಗೆ ಸಂಚಾತಹರಣ ಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಬೀದಿ ನಾಯಿಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎಂದು ತಿಳಿಸಿದ ಅವರು, ವರ್ಷದಿಂದ ವರ್ಷಕ್ಕೆ ಬೀದಿ ನಾಯಿಗಳು ಸಹಿತ ನಾಯಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ತಿಳಿಸಿದರು.





























 
 

ತಮ್ಮ ಮನೆಯ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸುವವರು 9902253064 ಈ ನಂಬರಿಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಡಾ.ರವಿಪ್ರಕಾಶ್‍, ರೋಟರಿ ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಹಾಜಿ ಮಹಮ್ಮದ್, ಅಶ್ವಿನಿ ಕೃಷ್ಣನಾರಾಯಣ ಮುಳಿಯ, ಕೃಷ್ಣನಾರಾಯಣ ಮುಳಿಯ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top