ಕಣಜದ ಹುಳು ದಾಳಿಗೆ ಒಳಗಾದ ವ್ಯಕ್ತಿ ಮೃತ್ಯು

ವೇಣೂರು: ಕಣಜದ ದಾಳಿಗೆ ಒಳಗಾದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಎಂಬಲ್ಲಿ ನಡೆದಿದೆ.

ಹೊಸಂಗಡಿ ಗ್ರಾಮದ ಕುಕ್ಕುದಕಟ್ಟೆ ನಿವಾಸಿ ರಾಜೇಶ್‍ ಶೆಟ್ಟಿ (44) ಮೃತಪಟ್ಟವರು.

ಕೃಷಿ ತೋಟದಲ್ಲಿ ಕೆಲಸದಲ್ಲಿ ನಿರತರಾಗಿದ್ದ ರಾಜೇಶ್‍ ಅವರ ಮೇಲೆ ಕಣಜದ ಹುಳುಗಳು ದಾಳಿ ಮಾಡಿದ್ದು, ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.





























 
 

ಈ ಕುರಿತು ಮೃತರ ಸಹೋದರ ಸತೀಶ ಶೆಟ್ಟಿ ವೇಣೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top