ಚಾಲಕನ ನಿಯಂತ್ರಣ ತಪ್ಪಿ ಚರುಂಬುರಿ ಸ್ಟಾಲ್‍ ಗೆ ನುಗ್ಗಿದ ಕಾರು | ಇಬ್ಬರಿಗೆ ಗಾಯ

ಪುತ್ತೂರು : ಚಾಲಕ ತನ್ನ ಕಾರನ್ನು ರಿವರ್ಸ್ ತೆಗೆಯುವಾಗ ಸಂದರ್ಭ ನಿಯಂತ್ರಣ ತಪ್ಪಿ ಸ್ಟಾಲ್‍ ಒಂದಕ್ಕೆ ನುಗ್ಗಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಕಿಲ್ಲೆ ಮೈದಾನದಲ್ಲಿ ನಡೆದಿದೆ.

ಚುರುಮುರಿ ಅಂಗಡಿಯಲ್ಲಿದ್ದ ವ್ಯಕ್ತಿ ಹಾಗೂ ಇನ್ನೊಬ್ಬರು ಗಾಯಗೊಂಡವರು ಅವರಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಣೇಶ ಉತ್ಸವದ ಪ್ರಯುಕ್ತ ತಾತ್ಕಲಿಕ ನೆಲೆಯಲ್ಲಿ ತೆರೆದಿದ್ದ ಅಂಗಡಿಗೆ  ಕಾರು ಢಿಕ್ಕಿ ಹೊಡೆದಿದ್ದು,  ಅಂಗಂಡಿ ಜಖಂ ಆಗಿದೆ.

ಗಾಯಾಳುಗಳಿಬ್ಬರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಮೂಲದ ವೆಂಕಟರಮಣ ಭಟ್ ಎಂಬವರಿಗೆ ಸೇರಿದ ಕೇರಳ ನೋಂದಣಿ  ಹೊಂದಿದ್ದ ಕಾರು ಅಪಘಾತಕ್ಕಿಡಾದ ವಾಹನ. ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top