ಸ್ಕೂಟರ್ ಅಪಘಾತ : ಯುವಕ‌ ಸ್ಥಳದಲ್ಲೇ ಮೃತ್ಯು

ಕಟಪಾಡಿ : ಬೆಳಪು‌ ವಿನಯ‌ನಗರ ಸ್ಮಶಾನದ ಬಳಿ ಸ್ಕೂಟರ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಎಲ್ಲೂರು ಗ್ರಾಮದ ಕುಂಡೇಲು ಬಂಡಸಾಲೆ ನಿವಾಸಿ ಮೇಸ್ತ್ರಿ ಅಶೋಕ್ ಮೂಲ್ಯ ಎಂಬವರ ಪುತ್ರ ಜಗದೀಶ್ (33) ಮೃತ ಯುವಕ.

ಪುಂಚಲಕಾಡುವಿಗೆ ತೆರಳಿದ್ದ ಅವರು  ಅಲ್ಲಿಂದ ಬೆಳಪು ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ವೇಳೆ ತಿರುವಾದ ರಸ್ತೆಯಲ್ಲಿ ಅವರು ಚಲಾಯಿಸುತ್ತಿದ್ದ‌ ಜುಪಿಟರ್  ಸ್ಕೂಟಿ ಸ್ಕಿಡ್ ಆಗಿ ಮೋರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.  ಢಿಕ್ಕಿಯ ರಭಸಕ್ಕೆ ಮೋರಿಗೆ ಬಡಿದು ಕೆಳಗೆ ಬಿದ್ದ ಅವರ ತಲೆಗೆ ಗಂಭೀರ ಏಟಾಗಿದ್ದು ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.





























 
 

ದುಬೈಯಲ್ಲಿ ಉದ್ಯೋಗದಲ್ಲಿದ್ದ ಇವರು  ನಾಲ್ಕೈದು ದಿನಗಳ ಹಿಂದಷ್ಟೇ ವಿದೇಶದಿಂದ ಊರಿಗೆ ಬಂದಿದ್ದು‌ ಇದೀಗ ಅಪಘಾತಕ್ಕೆ ಬಲಿಯಾಗಿದ್ದಾರೆ. ವರ್ಷದ ಹಿಂದಷ್ಟೇ  ವಿವಾಹವಾಗಿದ್ದು‌ ಅವರ ಪತ್ನಿ‌ ಪಸ್ತುತ ಗರ್ಭಿಣಿಯಾಗಿದ್ದಾರೆ. ಶಿರ್ವ ಪೋಲಿಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ತೆರವುಗೊಳಿಸಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top