ಭಾರತೀಯ ಜನತಾ ಪಾರ್ಟಿ ರಾಜ್ಯ ಉಸ್ತುವಾರಿಗಳ ನೇಮಕ

ನವದೆಹಲಿ :  ರಾಜ್ಯಸಭಾ ಸದಸ್ಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರವಾಲ್ ಅವರನ್ನು ರಾಜಸ್ಥಾನದ ಪಕ್ಷದ ಉಸ್ತುವಾರಿ ಮತ್ತು ಮಾಜಿ ಲೋಕಸಭಾ ಸಂಸದ ಹರೀಶ್ ದ್ವಿವೇದಿ ಅವರನ್ನು ಅಸ್ಸಾಂನ ಉಸ್ತುವಾರಿಯನ್ನಾಗಿ ಶುಕ್ರವಾರ ನೇಮಿಸಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಅರವಿಂದ್ ಮೆನನ್ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮಾಜಿ ಸಂಸದ ರಾಜದೀಪ್ ರಾಯ್ ಅವರನ್ನು ಕ್ರಮವಾಗಿ ತಮಿಳುನಾಡು ಮತ್ತು ತ್ರಿಪುರಾದ ಉಸ್ತುವಾರಿಯ ಜವಾಬ್ದಾರಿ ವಹಿಸಿದ್ದಾರೆ.

ಮೆನನ್ ಅವರಿಗೆ ಈಗಾಗಲೇ ನಿರ್ವಹಿಸಿದ ಜವಾಬ್ದಾರಿಯನ್ನು ಮರು ನಿಯೋಜಿಸಲಾಗಿದೆ.

































 
 

ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಮುಖ್ಯಸ್ಥೆ ವಿಜಯಾ ರಾಹತ್ಕರ್ ಅವರು ರಾಜಸ್ಥಾನದಲ್ಲಿ ಸಂಘಟನಾ ವ್ಯವಹಾರಗಳ ಸಹ-ಪ್ರಭಾರಿ ಯಾಗಿ ನೇಮಿಸಿದ್ದು ಅವರೊಂದಿಗೆ ತಮಿಳುನಾಡಿನ ಸುಧಾಕರ್ ರೆಡ್ಡಿ ಯವರನ್ನು ನೇಮಿಸಲಾಗಿದೆ.

ಇತರ ನೇಮಕಾತಿಗಳಲ್ಲಿ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಬದಲಿಗೆ ಬಿಹಾರದ ಸಚಿವ ದಿಲೀಪ್ ಕುಮಾರ್ ಜೈಸ್ವಾಲ್ ಅವರನ್ನು ಪಕ್ಷವು ತನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತು.

ಸಿ ಪಿ ಜೋಶಿ ಅವರ ಸ್ಥಾನಕ್ಕೆ ರಾಜ್ಯಸಭಾ ಸಂಸದ ಮದನ್ ರಾಥೋಡ್ ಅವರನ್ನು ರಾಜಸ್ಥಾನ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top