ಪಾಪೆಮಜಲು ಸರಕಾರಿ ಹಿ ಪ್ರಾ ಶಾಲಾ ನೂತನ ಸಭಾಂಗಣ ಉದ್ಘಾಟನೆ

ಪುತ್ತೂರು: ಶಾಲೆಗಳು ಊರಿನ‌ ದೇಗುಲ ಇದ್ದಂತೆ. ಅವುಗಳ‌ ಮೇಲೆ ಗ್ರಾಮಸ್ಥರಿಗೆ ಪ್ರೀತಿ ಇರಬೇಕು. ಎಲ್ಲರೂ ಒಟ್ಡಾಗಿ ಶಾಲೆಯ ಬಗ್ಗೆ ಒಲವು ತೋರಿಸಿದ್ದಲ್ಲಿ ಶಾಲೆಗಳು ಬೆಳಗುತ್ತದೆ ಎಂದು‌ ಶಾಸಕ ಅಶೋಕ್ ರೈ ಹೇಳಿದರು.

ಅವರು ಪಾಪೆಮಜಲು ಸರಕಾರಿ ಹಿ ಪ್ರಾ ಶಾಲೆಯಲ್ಲಿ ಸಿಎಸ್ ಆರ್ ಅನುದಾನದಿಂದ ನಿರ್ಮಾಣವಾದ ನೂತನ ಶಾಲಾ ಸಭಾಂಗಣವನ್ನು ಉದ್ಘಾಟಿಸಿ‌ ಮಾತನಾಡಿದರು.

ಮಕ್ಕಳ ಸಂಖ್ಯೇ ತೀರಾ ಕಡಿಮೆ ಇದೆ ಇದು ಅಪಾಯಕಾರಿ. ಶಾಲೆ ಉಳಿಯಬೇಕಾದರೆ ಮಕ್ಕಳು ಬೇಕಾಗುತ್ತದೆ.‌ ಮಕ್ಕಳು ಕಡಿಮೆ ಇರುವ ಶಾಲೆಗಳನ್ನು ಹೆಚ್ಚು‌ಮಕ್ಕಳಿರುವ ಶಾಲೆಗೆ ಮರ್ಜಿ‌ಮಾಡಿ ಅದನ್ನೇ ಕೆಪಿಎಸ್ ಶಾಲೆಯನ್ನಾಗಿ ಮಾಡಲಾಗುವುದು ಎಂದ ಅವರು. ಪ್ರಾಥಮಿಕ ಶಾಲೆಗಳಲ್ಲಿ‌ಆಂಗ್ಲ ಮಾಧ್ಯಮ ತರಗತಿಯನ್ನು ಆರಂಭಿಸಲಾಗಿದೆ. ಗ್ರಾಮೀಣ ಮಕ್ಕಳೂ ಆಂಗ್ಲ‌ಮಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರಕಾರ ಈ ವ್ಯವಸ್ಥೆ ಮಾಡಿದೆ ಎಂದರು.





























 
 

ವೇದಿಕೆಯಲ್ಲಿ ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್, ಎಂಆರ್ ಪಿ ಎಲ್ ಸಂಸ್ಥೆಯ ದಯಾನಂದ ಪ್ರಭು, ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತೆರೆಸಾ, ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ, ಮಾಜಿ ಸೈನಿಕ ಅಮಣ್ಣ ರೈ ಪಾಪೆಮಜಲು, ಪಾಪೆಮಜಲು ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಬಿ. ಪೂಜಾರಿ, ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್, ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್, ಗ್ರಾಪಂ‌ ಸದಸ್ಯರಾದ ನಾರಾಯಣ ನಾಯ್ಕ, ಪುಷ್ಪಲತಾ, ಗೀತಾ ದಯಾನಂದ, ದಯಾನಂದ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಪ್ರಮುಖರು, ಅಕ್ಷರ ದಾಸೋಹ‌ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮೇಬಲ್ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top