ಸಂತ ಫಿಲೋಮಿನಾ ಕಾಲೇಜಿನಿಂದ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಅರಿಯಡ್ಕ ಗ್ರಾಮ ಪಂಚಾಯತ್‌ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ  ಎ.ಜೆ. ಶೆಟ್ಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರವನ್ನು ಪಾಪೆಮಜಲು ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.

ಸವಣೂರಿನ ವಿದ್ಯಾ ರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಮಂಗಳೂರು ಎ.ಜೆ. ಶೆಟ್ಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎಂಡಿಎಸ್‌ ವಿಭಾಗದ ಪ್ರಾಧ್ಯಾಪಕರ ಡಾ. ಸತ್ಯಪ್ರಿಯ ಸಂಪನ್ಮೂಲ ವ್ಯಕ್ತಿಯಾಗಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ.ವಿಜಯ ಕುಮಾರ್ ಮೊಳೆಯಾರ್, ಗ್ರಾ.ಪಂ.ಅಧ್ಯಕ್ಷ ಸಂತೋಷ್ ಮಣಿಯಾಣಿ ಕುಟ್ಯಾಡಿ, ಕೋಟಿ ಚೆನ್ನಯ ಯೂತ್ ಕ್ಲಬ್ ಅಧ್ಯಕ್ಷ ಜಗದೀಶ್ ಬಿ., ಸಚಿನ್ ಪಾಪೆಮಜಲು, ಅಕ್ಷಯ ರಜಪೂತ್, ಗ್ರಾ.ಪಂ ಸದಸ್ಯ ಅಮ್ಮಣ್ಣ ರೈ ಡಿ.,  ಶಾಲಾ ಮುಖ್ಯ ಶಿಕ್ಷಕಿ ಜಯಲತಾ ಉಪಸ್ಥಿತರಿದ್ದರು.

































































 
 

ಶಾಲಾ ಎಸ್ ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣಿ, ಸಹಾಯಕ ಪ್ರಾಧ್ಯಾಪಕರಾದ ಪ್ರತಿಭಾ, ಶೀತಲ್ ಕುಮಾರ್, ಸಮಾಜಕಾರ್ಯ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯಾಧಿಕಾರಿ ಚೇತನಾ, ಅರಿಯಡ್ಕ ಪ್ರದೇಶದ ಸುತ್ತುಮುತ್ತಲಿನ ಜನರು ಭಾಗವಹಿಸಿದ್ದರು.

ಶಿಬಿರದಲ್ಲಿ ದಂತ ತಪಾಸಣೆ, ಸಾಮಾನ್ಯ ಔಷಧ ಸಮಾಲೋಚನೆ, ಗಂಟಲು, ಕಿವಿ ಮತ್ತು ಮೂಗು (ಇಎನ್‌ಟಿ) ತಪಾಸಣೆ, ಇಸಿಜಿ ಪರೀಕ್ಷೆಗಳು, ಮಧುಮೇಹ ತಪಾಸಣೆ, ಸ್ತ್ರೀರೋಗ ಪರೀಕ್ಷೆಗಳು, ಕಣ್ಣಿನ ತಪಾಸಣೆ, ಚರ್ಮರೋಗ ಸಮಾಲೋಚನೆಗಳು ಮತ್ತು ಮಕ್ಕಳ ತಪಾಸಣೆಸೇರಿದಂತೆ ಸಮಗ್ರ ಆರೋಗ್ಯ ಸೇವೆಗಳನ್ನು ನೀಡಲಾಯಿತು. ಕವನಾ ಮತ್ತು ತಂಡದವರು ಪ್ರಾರ್ಥಿಸಿದರು. ಶಿವ ಕಾರ್ತಿಕ್ ಸ್ವಾಗತಿಸಿದರು. ರಾಚೆಲ್ ಸಿಲ್ವೆಸ್ಟರ್ ವಂದಿಸಿ, ಅಶ್ವಿನಿ ರೈ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top