ರಾಮ್ ಲಲ್ಲಾ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಇನ್ನಿಲ್ಲ

ಅಯೋಧ್ಯೆ : ರಾಮಮಂದಿರದಲ್ಲಿ ರಾಮ್ ಲಲ್ಲಾ ಪ್ರತಿಮೆ ಪ್ರತಿಷ್ಠಾಪನೆ ನೆರವೇರಿಸಿದ್ದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ (86) ದೀರ್ಘಕಾಲದಿಂದ ಅನಾರೋಗ್ಯದಿಂದ ನಿಧನರಾಗಿದ್ದಾರೆ.


ಲಕ್ಷ್ಮೀಕಾಂತ್ ದೀಕ್ಷಿತ್ ಅವರು ವಾರಣಾಸಿಯ ಮೀರ್ ಘಾಟ್ ನ ಸಾಂಗೋದ್ ಕಾಲೇಜಿನಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದರು.


ಆಚಾರ್ಯ ಲಕ್ಷ್ಮೀಕಾಂತ್ ಅವರು ಕಾಶಿಯ ಯಜುರ್ವೇದದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾಗಿದ್ದು, ಆರಾಧನೆಯಲ್ಲೂ ಪರಿಣಿತರಾಗಿದ್ದರು. ಅವರು ತಮ್ಮ ಚಿಕ್ಕಪ್ಪ ಗಣೇಶ್ ದೀಕ್ಷಿತ್ ಭಟ್ ಅವರಿಂದ ವೇದಗಳು ಮತ್ತು ಆಚರಣೆಗಳಲ್ಲಿ ದೀಕ್ಷೆ ಪಡೆದು ಬಳಿಕ ಅವರ ಕುಟುಂಬವು ಹಲವಾರು ತಲೆಮಾರುಗಳ ಹಿಂದೆ ಕಾಶಿಯಲ್ಲಿ ನೆಲೆಸಿತು. ಅವರ ಪೂರ್ವಜರು ನಾಗ್ಪುರ, ನಾಸಿಕ್ ಸಂಸ್ಥಾನಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top